Advertisement
“ಚಿನ್ನ ಚಿತ್ತಾರ’ ಕಾರ್ಯಕ್ರಮದಲ್ಲಿ ಏರ್ಪಡಿಸಿದ ಕಾಸರಗೋಡು ಚಿನ್ನಾ ಅವರ ಕುರಿತಾದ ವಿಚಾರಗೋಷ್ಠಿಯನ್ನು ಖ್ಯಾತ ರಂಗಕರ್ಮಿ ಕೆ.ವಿ. ನಾಗರಾಜಮೂರ್ತಿ ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡುತ್ತಾ ಏಕ ಕಾಲಕ್ಕೆ ಕರ್ನಾಟಕ ಹಾಗೂ ಕೇರಳ ಎರಡೂ ರಾಜ್ಯಗಳಲ್ಲಿ ಅಕಾಡೆಮಿ ಸದಸ್ಯನಾಗಿ ದುಡಿದ ಚಿನ್ನಾ ಅವರು ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆಗೆ ಎಂದೂ ಬಜೆಟ್ಟಿನ ಪರಿಮಿತಿ ಹಾಕಿಕೊಂಡವರಲ್ಲ. ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸುವುದರಲ್ಲಿ ಎತ್ತಿದ ಕೈ ಎಂದರು.
Related Articles
Advertisement
ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರಿನ ಅಂಕಣಕಾರ, ಪತ್ರಕರ್ತ ರವೀಂದ್ರ ಜೋಷಿ ಚಿನ್ನಾ ಅವರ ಬಹು ಮುಖ ವ್ಯಕ್ತಿತ್ವವನ್ನು ತಿಳಿಸಿ ಕರ್ನಾಟಕದ ರಾಜಧಾನಿಯಲ್ಲಿ ಅವರನ್ನು ಗೌರವಿಸುವ ಮುಖಾಂತರ ನಮಗೆ ನಾವೇ ಸಮ್ಮಾನಿಸಿಕೊಳ್ಳುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ದತ್ತಣ್ಣ ಅವರು “ದುಡ್ಡು ದೊಡ್ಡದ್ದಲ್ಲ, ದುಡಿಮೆ ದೊಡ್ಡದು. ಜೀವ ದೊಡ್ಡದ್ದಲ್ಲ ಜೀವನ ದೊಡ್ಡದು’. ಅದಕ್ಕೆ ತಕ್ಕಂತೆ ಚಿನ್ನಾ ಜೀವನ ಮಾಡಿದ್ದಾರೆ ಎಂದರು.ವಿಚಾರಗೋಷ್ಠಿಯ ಅಧ್ಯಕ್ಷತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್.ಜಿ. ಸಿದ್ಧರಾಮಯ್ಯ ವಹಿಸಿ ಮಾತನಾಡಿದರು. ಕಾಸರಗೋಡು ಚಿನ್ನಾ ಹಾಗೂ ಅವರ ಪತ್ನಿ ಅನಿತಾ ಅವರಿಗೆ ಸಮಸ್ತ ಬೆಂಗಳೂರಿನ ಕಲಾವಿದರ ಪರವಾಗಿ “ರಂಗ ಗೌರವ’ ವನ್ನು ನೀಡಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಖ್ಯಾತ ಸುಗಮ ಸಂಗೀತ ಗಾಯಕಿ ಸೀಮಾ ರಾಯ್ಕರ್ ಹಾಗೂ ಬಿ.ಪಿ.ಗೋಪಾಲಕೃಷ್ಣ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಿತು. ಭಾಗವತರು ಸಂಸ್ಥೆಯ ರೂವಾರಿ ರೇವಣ್ಣ ಸ್ವಾಗತಿಸಿದರು. ಶಿವಲಿಂಗಯ್ಯ ಕಾರ್ಯಕ್ರಮ ನಿರೂಪಿಸಿದರು. ರಂಗಭೂಮಿ, ಸಾಹಿತ್ಯ, ಚಲನಚಿತ್ರ ಕ್ಷೇತ್ರದ ಹಲವಾರು ಜನರು ಭಾಗವಹಿಸಿದ್ದರು. ಸಾರ್ಥಕ ಜೀವನ ನಡೆಸಿಕೊಂಡು ಬಂದಿದ್ದೇನೆ. ಸಮ್ಮಾನದ ಹಿಂದೆ ಓಡಿ ಹೋಗಿಲ್ಲ. ನಾನು ಸಂಘ ಜೀವಿ. ಹಾಗೇ ಭಾವಜೀವಿ ಕೂಡ. ಆದರೆ “ಬುದ್ಧಿ ಜೀವಿ’ ಅಲ್ಲ. ಕಾವೇರಿಗಾಗಿ ಧ್ವನಿ ಎತ್ತುವ ಕರ್ನಾಟಕದ ಜನ ಕಾಸರಗೋಡಿಗಾಗಿ ಧ್ವನಿ ಎತ್ತಿದರೆ ಅಲ್ಲಿನ ಕನ್ನಡಿಗರಲ್ಲಿ ಭಾಷಾ ಅಲ್ಪಸಂಖ್ಯಾಕರು ಎಂಬ ಅನಾಥ ಪ್ರಜ್ಞೆ ದೂರವಾಗಲಿದೆ.
– ಕಾಸರಗೊಡು ಚಿನ್ನಾ