Advertisement

ಕಾಸರಗೋಡು: ಬಿಜೆಪಿ ವಿಜಯೋತ್ಸವ

11:06 PM May 24, 2019 | Team Udayavani |

ಕಾಸರಗೋಡು: “ಫಿರ್‌ ಏಕ್‌ ಬಾರ್‌ವೊàದಿ ಸರ್ಕಾರ್‌’ ಎಂಬ ಘೋಷಣೆಯೊಂದಿಗೆ ಚುನಾವಣೆಯನ್ನೆದುರಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ನಗರ ಸಹಿತ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Advertisement

ಬಿಜೆಪಿ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಸಿಹಿ ಹಂಚಿ ವಿಜಯೋತ್ಸವ ನಡೆಸಿದರು. ಮೆರವಣಿಗೆಯ ಸಂದರ್ಭದಲ್ಲಿ ಪಟಾಕಿ ಸಿಡಿಸಿದರು. ಮೆರವಣಿಗೆಗೆ ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್‌, ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಜಿ.ಚಂದ್ರನ್‌, ಸವಿತಾ ಟೀಚರ್‌, ಪಿ.ಆರ್‌.ಸುನಿಲ್‌, ಅಂಜು ಜೋಸ್ಟಿ, ಗಿರಿಧರ ಕಾಮತ್‌, ಕೆ.ಗುರುಪ್ರಸಾದ್‌ ಪ್ರಭು, ಜಾಹ್ನವಿ, ಉಮಾ ಕಡಪ್ಪುರ, ರವಿ ಕರಂದಕ್ಕಾಡು, ಶ್ರೀಲತಾ ಟೀಚರ್‌ ಮೊದಲಾದವರು ನೇತೃತ್ವ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next