Advertisement

Kasaragodu: ಲಾರಿ ಚಾಲಕನಿಗೆ ಹಲ್ಲೆ: ನಾಲ್ವರ ಬಂಧನ

12:24 AM Jul 31, 2024 | Team Udayavani |

ಕಾಸರಗೋಡು: ಲಾರಿ ಚಾಲಕ ಕೊಚ್ಚಿ ಇಡಪಳ್ಳಿ ನಿವಾಸಿ ಕೆ.ಎಸ್‌. ನಿಯಾಸುದ್ದೀನ್‌ (33) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಳನಾಡು ನಿವಾಸಿಗಳಾದ ಎ.ಪಿ. ಅಕ್ಷಯ್‌ (25), ಡಿ.ಕೆ. ಅರ್ಜುನ್‌(22), ಡಿ.ಎಂ. ಸುದರ್ಶನ್‌ (22) ಮತ್ತು ಕೆ.ವಿ. ಸುಜಿತ್‌ಲಾಲ್‌(24)ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.

Advertisement

ಕಳನಾಡು ಪೆಟ್ರೋಲ್‌ ಬಂಕ್‌ ಬಳಿ ಜುಲೈ 27ರಂದು ಸಂಜೆ ಲಾರಿಯಿಂದ ಹೊರಕ್ಕೆ ಎಳೆದು ಹಾಕಿ ಹಲ್ಲೆ ಮಾಡಲಾಗಿತ್ತೆಂದು ಪೊಲೀಸರಿಗೆ ದೂರು ನೀಡಲಾಗಿತ್ತು.

ಯುವಕ ನಾಪತ್ತೆ
ಕುಂಬಳೆ: ಪೇರಾಲ್‌ ಕಣ್ಣೂರಿನ ರಾಮ ಅವರ ಪುತ್ರ ಹರೀಶ್‌(42) ನಾಪತ್ತೆ ಯಾಗಿ ರುವು ದಾಗಿ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕೂಲಿ ಕಾರ್ಮಿಕರಾದ ಹರೀಶ್‌ ಜು. 27ರಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸ ಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next