Advertisement

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

01:55 AM Sep 20, 2024 | Team Udayavani |

ಕಾಸರಗೋಡು: ರಿಕ್ಷಾ ಚಾಲಕ ಉಪ್ಪಳ ಹಿದಾಯತ್‌ ನಗರದ ಸಕೀರ್‌ ಮಂಜಿಲ್‌ನ ಜಮ್ಮಿ ಯಾನೆ ಮುಹಮ್ಮದ್‌ ಸಮೀರ್‌ (26) ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಅಬೂಬಕರ್‌ ಸಿದ್ದಿಕ್‌(45)ಗೆ ಕಾಸರಗೋಡು ಅಡಿಷನಲ್‌ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ(ಒಂದು) ಜೀವಾವಧಿ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.

Advertisement

ಪ್ರಕರಣದ ಎರಡನೇ ಆರೋಪಿ ಹಾರೂನ್‌ ರಾಶೀದ್‌ ತಲೆಮರೆಸಿಕೊಂಡಿದ್ದಾನೆ. ಮೂರನೇ ಆರೋಪಿ ಮುಹಮ್ಮದ್‌ ಕುಂಞಿ ವಿಚಾರಣೆಗೆ ಮೊದಲೇ ನಿಧನ ಹೊಂದಿದ್ದಾನೆ. 2008ರ ಆ. 24ರಂದು ರಾತ್ರಿ ಪೊಸೋಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲೆ ನಡೆದಿತ್ತು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next