Advertisement
ಕಾಸರಗೋಡಿಗರಿಗೆ ಮಳೆಗಾಲದ ದಿನಗಳಲ್ಲಿ ಅನೇಕ ತಾತ್ಕಾಲಿಕ ಜಲಪಾತಗಳು ಸನಿಹದಲ್ಲೇ ಇವೆ. ಉದಾಹರಣೆಗೆ ಕಲಾವಿದ ಪಿ.ಎಸ್. ಪುಣಿಂಚಿತ್ತಾಯರ ಕಲಾಗ್ರಾಮದ ತೋಟದಲ್ಲಿ ಸಣ್ಣಗೆ ಧುಮುಕುವ ಜಲಪಾತವಿದೆ – ಕಾರಡ್ಕ ಗ್ರಾಮದಲ್ಲಿ.
ಸಂಚರಿಸುವ ಗ್ರಾಮೀಣ ರಸ್ತೆ ಹೊಂಡ- ಗುಂಡಿಗಳಿಲ್ಲದೆ ಕಾರು ಪಯಣಕ್ಕೆ ಹೇಳಿ ಮಾಡಿಸಿದಂತಿದೆ. ಕಾಡನ್ನು ಸೀಳಿ ಹಚ್ಚ ಹಸುರಿನ ಬೆಟ್ಟಗಳ ನಡುವೆ ಹರಿಯುವ ತೊರೆಗಳನ್ನು ಕ್ರಮಿಸಿ ನೀವು ವೆಳ್ಳರಿಕುಂಡು ಪೇಟೆ ಸೇರಿದರೆ ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಕೊನ್ನಕ್ಕಾಡು ತಲುಪುತ್ತೀರಿ. ರಸ್ತೆ ಇಕ್ಕೆಲಗಳಲೆಲ್ಲೂ ಕಸ ಕೊಚ್ಚೆಗಳಿಲ್ಲದೆ ಸ್ವತ್ಛವಾಗಿರಿಸಿದ್ದು ವಿಶೇಷ.
Related Articles
ಮಳೆಗಾಲದ ಸುತ್ತಾಟಕ್ಕೆ (ಮನ್ಸೂನ್ ಟೂರಿಸಂ) ಹೇಳಿ ಮಾಡಿದಂತಿದೆ. ಇಲ್ಲಿನ ಪ್ರಕೃತಿ ವೈಭವ ಈ ಜಲಪಾತಗಳು ಸುಮಾರು 3-4 ತಿಂಗಳು ತನಕ ಇದ್ದು ಮಳೆಯ ರಭಸ ಕ್ಷೀಣಿಸುತ್ತಲೇ ಭೋರ್ಗರೆತ ಕಳೆದು ಸುಸ್ತಾಗುತ್ತವೆ. ಜಲಪಾತದಿಂದ ಹರಿದು ಹೋಗುವ ನೀರು ಚೈತ್ರವಾಹಿನಿ ನದಿಯನ್ನು ಸೇರುತ್ತದೆ.
Advertisement
ಸ್ನಾನ ಮಾತ್ರ ಅಪಾಯಕರಇಲ್ಲಿ ಜಲಪಾತದಲ್ಲಿ ಸ್ನಾನ ಮಾಡಲು ಯಾವುದೇ ಸುರಕ್ಷಿತ ಸೌಕರ್ಯವಿಲ್ಲದಿರು ವುದು ಒಂದು ಕೊರತೆ. ಧುಮ್ಮಿಕ್ಕುವ ಜಲಧಾರೆ ಕೆಳಗಿನ ಬಂಡೆಕಲ್ಲುಗಳ ಮೇಲೆ ಅಪ್ಪಳಿಸಿ ಮುಂದೆ ಸಾಗುತ್ತವೆ. ಅಲ್ಲಿ ನಿಂತು ಸ್ನಾನ ಮಾಡುವುದು ಅಪಾಯವನ್ನು ಆಹ್ವಾನಿಸಿದಂತೆಯೇ ಸರಿ. ಏನಿದ್ದರೂ ಕಾಸರಗೋಡು ನಗರದಿಂದ ಎರಡು ಗಂಟೆ ಕಾರು ಪಯಣ ಮಾಡಿದರೆ ಪ್ರಕೃತಿಯ ಮಡಿಲಲ್ಲಿ ವಯನಾಡಿನ ಅನುಭವ ನೀಡುವ ಪ್ರಕೃತಿಯಲ್ಲಿ ಹಾಯಾಗಿ ಸಮಯ ಕಳೆಯಬಹುದು. ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಪನತ್ತಡಿ ರಸ್ತೆಯಲ್ಲಿ ಹಿಂದಿರುಗಿ ಬರುವಾಗ ಮಾವುಂಗಾಲ್ನಲ್ಲಿ ಸ್ವಾಮಿ ರಾಮದಾಸರ ಆಶ್ರಮವನ್ನು ಸಂದರ್ಶಿಸಿ ಕೃತಾರ್ಥರಾಗಬಹುದು. ಮುಂದೆ ಕಾಂಞಂಗಾಡು ಪೇಟೆ ಬರುತ್ತದೆ. ಬಿ.ನರಸಿಂಗ ರಾವ್