Advertisement

Kasaragod: ಕುಂಬಳೆ ಅಪರಾಧ ಸುದ್ದಿಗಳು

09:31 PM Sep 01, 2023 | Team Udayavani |

ನೇಣು ಬಿಗಿದು ಯುವಕ ಆತ್ಮಹತ್ಯೆ
ಕುಂಬಳೆ: ಹೇರೂರು ಪಣಿಯೂರು ನಿವಾಸಿ ರಮೇಶ್‌ ಶೆಟ್ಟಿ ಅವರ ಪುತ್ರ ನವದೀಪ್‌ ಪಿ.(26) ಅವರು ಮನೆ ಹಿತ್ತಿಲಿನಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ನವದೀಪ್‌ ಪ್ರೀತಿಸುತ್ತಿದ್ದ ಯುವತಿಯ ಸಂಬಂಧಿಕರು ಬಂದ್ಯೋಡ್‌ನ‌ಲ್ಲಿ ಬೆದರಿಕೆಯೊಡ್ಡಿರುವುದಾಗಿ ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿನಿಯರಿಗೆ ಕಾರು ಢಿಕ್ಕಿ :ಆರೋಪಿಗಾಗಿ ಶೋಧ
ಕುಂಬಳೆ: ವಾರಗಳ ಹಿಂದೆ ಕುಂಬಳೆ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರಿಗೆ ಕಾರು ಢಿಕ್ಕಿ ಹೊಡೆಸಿ ಪರಾರಿಯಾದ ವಳಯಂನ ನೌಶಾದ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದೇ ವೇಳೆ ಢಿಕ್ಕಿ ಹೊಡೆದ ಕಾರನ್ನು ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

ಕಾರು ಮಗುಚಿ ವಿದ್ಯಾರ್ಥಿ ಸಾವು : ಕ್ರೈಂ ಬ್ರಾಂಚ್‌ ತನಿಖೆ
ಕುಂಬಳೆ: ಕಾರು ಅಪಘಾತಕ್ಕೀಡಾಗಿ ವಿದ್ಯಾರ್ಥಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಕಾರು ಅಪಘಾತಕ್ಕೀಡಾದ ಕಳತ್ತೂರು ಪಳ್ಳಕ್ಕೆ ಜಿಲ್ಲಾ ಕ್ರೈಂಬ್ರಾಂಚ್‌ ಅಧಿಕಾರಿಗಳು ತೆರಳಿ ಪ್ರಾಥಮಿಕ ಪರಿಶೀಲನೆ ನಡೆಸಿದರು. ಅವರು ನಡೆಸಿದ ಪರಿಶೀಲನೆಯ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.

Advertisement

ಮದ್ಯ ಸಹಿತ ಬಂಧನ
ಕುಂಬಳೆ: 180 ಮಿಲ್ಲಿಯ 20 ಪ್ಯಾಕೆಟ್‌ ಮದ್ಯ ಸಹಿತ ಬಾಡೂರು ಪಾಡಿಯ ನಾರಾಯಣ(46)ನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಬಾಡೂರು ಜಂಕ್ಷನ್‌ನಿಂದ ಮದ್ಯ ವಶಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next