Advertisement

Kasaragod;ಶಾಲಾ ಅಧ್ಯಾಪಕರಿಬ್ಬರ ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಸೆರೆ

10:56 PM Aug 29, 2023 | Team Udayavani |

ಕಾಸರಗೋಡು: ಶಾಲಾ ಅಧ್ಯಾಪಕರಿಬ್ಬರ ಮೋಟಾರ್‌ ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮಲಪುರಂ ವಳಾಂಚೇರಿ ಠಾಣೆಯ ವ್ಯಾಪ್ತಿಯ ವಿ.ಪಿ. ಸೈದಲವಿ (58)ಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಪಿ.ವಿ. ಸೈದಲವಿಗೆ ಸುಮಾರು 50 ಲಕ್ಷ ರೂ. ನಷ್ಟು ನಷ್ಟ ಸಂಭವಿಸಿದ್ದಾಗಿಯೂ, ಅದರ ದುಃಖದಲ್ಲಿ ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ವೇಳೆ ಅಧ್ಯಾಪಕರೊಂದಿಗೆ ವಿ.ಪಿ.ಸೈದಲವಿಗೆ ಯಾವುದೇ ಸಂಬಂಧವಿಲ್ಲವೆಂದೂ, ಆತ ಮೂರು ದಿನಗಳ ಹಿಂದೆಯಷ್ಟೇ ಕಾಸರಗೋಡಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಳಂಗರೆ ಪಳ್ಳಿಕಾಲ್‌ನ ಮಸೀದಿ ಪರಿಸರದಲ್ಲಿ ಇರಿಸಿದ್ದ ಎರಡು ಬೈಕ್‌ಗಳಿಗೆ ಸೋಮವಾರ ಮುಂಜಾನೆ ಬೆಂಕಿ ಹಚ್ಚಲಾಗಿತ್ತು. ಮಸೀದಿಯ ಬಾಡಿಗೆ ಕಟ್ಟಡದಲ್ಲಿ ವಾಸಿಸುತ್ತಿರುವ ಮಲಪ್ಪುರಂ ಪುಳಿಕಲ್‌ ಕೋಡಿಕುತ್ತಿಪರಂಬ್‌ ನಿವಾಸಿ ನಜ್‌ಮುದ್ದೀನ್‌ ಹಾಗೂ ಮಲಪ್ಪುರಂ ವಲಿಯೋರ ಆಶಾರಿಪ್ಪಡಿಯ ಮುಹಮ್ಮದ್‌ ಸಾಜಿತ್‌ ಅವರ ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next