Advertisement

Kasaragod ಉಗ್ರ ನಿಗ್ರಹ ದಳ ಕಾರ್ಯಾಚರಣೆ ಮಾವೋವಾದಿ ಮನೋಜ್‌ ಬಂಧನ

12:28 AM Jul 20, 2024 | Team Udayavani |

ಕಾಸರಗೋಡು: ಉಗ್ರ ನಿಗ್ರಹದಳ (ಎಟಿಎಸ್‌) ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಾವೋ ವಾದಿ ನೇತಾರ ತ್ರಿಶ್ಶೂರು ಇವನ್ನೂರು ಪಡಿಞಾರತಲ ವೀಟಿಲ್‌ ಮನೋಜ್‌(35)ನನ್ನು ಎರ್ನಾಕುಳಂ ಸೌತ್‌ ರೈಲು ನಿಲ್ದಾಣ ದಿಂದ ಬಂಧಿಸಲಾಗಿದೆ.

Advertisement

ಈತ 14 ಯು.ಎ.ಪಿ.ಎ. ಪ್ರಕರಣಗಳ ಆರೋಪಿಯಾಗಿದ್ದಾನೆ. ಈತ ಬ್ರಹ್ಮಾಪುರಕ್ಕೆ ತೆರಳಿ ಅಲ್ಲಿನ ತನ್ನ ಸ್ನೇಹಿತ ರಿಂದ ಹಣ ಪಡೆದು ಮರಳು ತ್ತಿದ್ದಾಗ ಬಂಧಿಸಲಾಯಿತು. ಮೆಕ್ಯಾನಿಕಲ್‌ ಎಂಜಿನಿಯರ್‌ ಕೋರ್ಸ್‌ನ್ನು ಅರ್ಧದಲ್ಲೇ ಕೈಬಿಟ್ಟು ಮಾವೋವಾದಿ ಗುಂಪಿಗೆ ಸೇರಿದ್ದ.

ಕೇರಳವನ್ನು ಕೇಂದ್ರೀಕರಿಸಿ ಕಾರ್ಯ ವೆಸಗುತ್ತಿರುವ ಮಾವೋ ವಾದಿ ತಂಡಕ್ಕೆ ಸೇರಿರುವ ಈತ ವಯನಾಡು ಜಿಲ್ಲೆಯನ್ನೇ ಪ್ರಧಾನ ಕೇಂದ್ರವಾಗಿಸಿಕೊಂಡಿದ್ದ. ವಯ ನಾಡು ಜಿಲ್ಲಾ ವರಿಷ್ಠ ಪೊಲೀಸಧಿಕಾರಿ ಈತನನ್ನು ವಾಂಟೆಡ್‌ ಆರೋಪಿಗಳ ಯಾದಿಯಲ್ಲೂ ಸೇರಿಸಿದ್ದರು. ವಯ ನಾಡು ಅರಣ್ಯದಲ್ಲಿ ಇತ್ತೀ ಚೆಗೆ ನೆಲಬಾಂಬ್‌ ಪತ್ತೆಯಾದ ಹಿನ್ನೆಲೆ ಯಲ್ಲಿ ಎಟಿಎಸ್‌ ಕಾರ್ಯಾ ಚರಣೆ ಯನ್ನು ತೀವ್ರಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next