Advertisement

ಪಾಟೀಲ ಜತ್ತ ಕಸಾಪ ಅಧ್ಯಕ

02:45 PM Jun 20, 2018 | |

ಸೊಲ್ಲಾಪುರ: ಕನ್ನಡ ಹೋರಾಟಗಾರ ಆರ್‌.ಕೆ. ಪಾಟೀಲ ಅವರನ್ನು ಜತ್ತ ತಾಲೂಕು ಘಟಕದ ಅಧ್ಯಕ್ಷರಾಗಿ ಅವರನ್ನು ನೇಮಕ ಮಾಡಲಾಗಿದೆ.  

Advertisement

ಮುಂಬರುವ ಜುಲೈ ತಿಂಗಳಲ್ಲಿ ಜತ್ತ ಮತ್ತು ಅಕ್ಕಲಕೋಟ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ
ಹಮ್ಮಿಕೊಳ್ಳಲಾಗುವುದು ಎಂದು ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಬಸವರಾಜ ಮಸೂತಿ ಹೇಳಿದರು.

ಜತ್ತ ತಾಲೂಕಿನ ಸಂಖ ಗ್ರಾಮದ ಗುರುಬಸವ ವಿದ್ಯಾ ಮಂದಿರದಲ್ಲಿ ನಡೆದ ಕಸಾಪ ಜತ್ತ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು. ಕಸಾಪ ಜತ್ತ ತಾಲೂಕು ಘಟಕದ ಅಧ್ಯಕ್ಷರನ್ನು ನೇಮಕ ಮಾಡಲು ರಾಜ್ಯಾಧ್ಯಕ್ಷ ಡಾ| ಮನು ಬಳಿಗಾರ ಅವರು ಅನುಮತಿ ನೀಡಿದ್ದಾರೆ.

ಮೊದಲ ಹಂತವಾಗಿ ಮುಂಬಯಿ ಮಹಾನಗರ ಘಟಕ, ಅಕ್ಕಲಕೋಟ ಮತ್ತು ಜತ್ತ ತಾಲೂಕು ಘಟಕ ರಚನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಸೊಲ್ಲಾಪುರ ಹಾಗೂ ಉದಗಿರ ಸೇರಿದಂತೆ ಹಲವು ತಾಲೂಕು
ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

ಕಸಾಪ ಅಕ್ಕಲಕೋಟ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮಡ್ಡೆ, ಆದರ್ಶ ಕನ್ನಡ ಬಳಗ ಅಧ್ಯಕ್ಷ ಮಲಿಕಜಾನ್‌ ಶೇಖ, ಪತ್ರಕರ್ತ ಸೋಮಶೇಖರ ಜಮಶೆಟ್ಟಿ ಹಾಗೂ ರಾಕೇಶ ಘಾಳಿ ಮಾತನಾಡಿದರು.  ಪ್ರಕಾಶ ಹಿಪ್ಪರಗಿ, ಆರ್‌.ಬಿ. ಪಾಟೀಲ, ಮಧು ಪರೋಳೆಕರ, ಕಿರಣ ಪಾಟೀಲ, ಅಜಯ ಪಾಟೀಲ, ಅಪ್ಪಾಸಾಹೇಬ ಪುಟಾಣೆ,
ಕವಿತಾ ಪಾಟೀಲ, ಆರ್‌.ಜಿ. ಬಿರಾದಾರ, ಸೋಮನಾಥ ಪೂಜಾರಿ, ಶಂಕರ ಬಾಗೇಳಿ, ಸತೀಶ ಬಿರಾದಾರ, ಕರಬಸಯ್ಯ ಸ್ವಾಮಿ, ಅಮಗೊಂಡ ಜಿಗಜಿಗಣಿಗಿ, ಸಂದೀಪ ಮಾನೆ, ಕುಮಾರ ಬಿರಾದಾರ, ಬಸವರಾಜ ಆಲಮದ, ಪ್ರಕಾಶ ಗೊಬ್ಬುರ, ಗಿರಮಲ್ಲಪ್ಪ ಬರಮಾ, ಪ್ರಕಾಶ ಪ್ರಧಾನ, ಸುನೀಲ ಸವಳಿ, ಓಂಕಾರ ಬುರೂಡ, ಸಿದ್ಧಾರಾಮ ಗೊಬ್ಬುರ, ರಾಜಶ್ರೀ ಮಸೂತಿ, ಮಲ್ಲಿನಾಥ ವಚ್ಚೆ ಇದ್ದರು.

Advertisement

ಡಾ| ಕೆ.ಕೆ.ಪತ್ತಾರ ಸ್ವಾಗತಿಸಿದರು. ಪ್ರಶಾಂತ ವಾಗೋಲಿ ನಿರೂಪಿಸಿದರು. ಶಿವಾನಂದ ಧನ್ಯಾಳ ವಂದಿಸಿದರು.
ನೂತನ ಪದಾಧಿಕಾರಿಗಳು: ಆರ್‌. ಕೆ.ಪಾಟೀಲ (ಅಧ್ಯಕ), ಎಂ.ಐ.ಜಿಡ್ಡಿ ಮತ್ತು ಗುರುಬಸು ವಾಗೋಲಿ (ಗೌರವ
ಕಾರ್ಯದರ್ಶಿ) ವಿಜಯಕುಮಾರ ಬಿರಾದಾರ (ಕೋಶಾಧ್ಯಕ್ಷ), ಚಂದ್ರಶೇಖರ ಕಾರಕಲ (ಸಂಘ-ಸಂಸ್ಥೆ ಪ್ರತಿನಿಧಿ),
ಸುಜಾತಾ ಬಿರಾದಾರ (ಮಹಿಳಾ ಪ್ರತಿನಿಧಿ), ಅರವಿಂದ ಕರಡಿ (ಪ್ರಚಾರ ಪ್ರಮುಖರು), ಕುಮಾರ ವ್ಹಿಟೇಕರ (ಪ.ಪ. ಪ್ರತಿನಿಧಿ) ಅವರನ್ನು ನೇಮಕ ಮಾಡಲಾಗಿದೆ.

ಕನ್ನಡ ಹೋರಾಟಗಾರ ಆರ್‌.ಕೆ. ಪಾಟೀಲ ಅವರನ್ನು ಜತ್ತ ತಾಲೂಕಿನ ಕಸಾಪ ಅಧ್ಯಕ್ಷರಾಗಿ ನೇಮಕ ಮಾಡಿದ್ದರಿಂದ ಈ ಭಾಗದ ಕನ್ನಡಿಗರಿಗೆ ಸಂತಸ ತಂದಿದೆ. ಜತ್ತ ತಾಲೂಕಿನಲ್ಲಿ ಕನ್ನಡಕ್ಕಾಗಿ ನಿರಂತರ ಹೋರಾಟದ ಫಲವಾಗಿ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸಿದ್ದು ನಮ್ಮೆಲ್ಲರಿಗೆ ಹೆಮ್ಮೆ. ಕನ್ನಡ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗಾಗಿ ಇನ್ನೂ
ಶ್ರಮಿಸಲಿದ್ದಾರೆ. 
 ಮಲಿಕಜಾನ್‌ ಶೇಖ, ಅಧ್ಯಕ್ಷರು, ಆದರ್ಶ ಕನ್ನಡ ಬಳಗ

Advertisement

Udayavani is now on Telegram. Click here to join our channel and stay updated with the latest news.

Next