Advertisement

Karwar: ಕಾರು ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು

09:51 PM Oct 07, 2023 | Team Udayavani |

ಕಾರವಾರ : ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ – 66 ರಲ್ಲಿ ಬಿಣಗಾ ಸಮೀಪದ ಕರಿದೇವರ ದೇವಸ್ಥಾನದ ಬಳಿ ಶನಿವಾರ ನಡೆದಿದೆ.

Advertisement

ಅಗಸೂರು ಸಮೀಪ ಹೊನ್ನಳ್ಳಿ ನಿವಾಸಿ ಪ್ರವೀಣ ಕೇಶವ ಗೌಡ (25) ಮೃತ ಯುವಕ ನಾಗಿದ್ದಾನೆ. ಪ್ರವೀಣ ಕಾರವಾರದಿಂದ ಅಂಕೋಲಾ ಕಡೆ ಬೈಕ್ ಚಲಾಯಿಸುತ್ತಿದ್ದ, ಅಂಕೋಲಾ ದಿಂದ ಕಾರವಾರ ಕಡೆ ಸಾಗುತ್ತಿದ್ದ ಕಾರು ಢಿಕ್ಕಿ ಹೊಡೆಯಿತು ಎನ್ನಲಾಗಿದೆ.‌ ತಲೆಯ ಹಿಂಬದಿಗೆ ಗಂಭೀರವಾಗಿ ಗಾಯಗೊಂಡು ಪ್ರವೀಣ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿ ಎದುರಿಗೆ ಬಂದ ಬೈಕಿಗೆ ಢಿಕ್ಕಿ ಹೊಡೆಡಿದ್ದಾನೆ ಎನ್ನಲಾಗಿದೆ.

ಕಾರವಾರ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿತ ಕಾರು ಚಾಲಕ ಗೋವಾದ ನಾವೆಲಿಂ ನಿವಾಸಿಯಾದ ಶೇಖ್ ಎಂ. ಅಲಿ ಶೇಖ್ ಅಬ್ದುಲ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next