Advertisement

ಲಂಕಾ ಟೆಸ್ಟ್ ನಾಯಕ ಕರುಣರತ್ನೆ ಪೊಲೀಸ್ ವಶಕ್ಕೆ

05:19 PM Mar 31, 2019 | keerthan |

ಕೊಲಂಬೋ: ಕಂಠಪೂರ್ತಿ ಕುಡಿದ ಅಮಲಿನಲ್ಲಿ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಶ್ರೀಲಂಕಾ ಟೆಸ್ಟ್ ತಂಡದ ನಾಯಕ ದಿಮ್ಮುತ ಕರುಣರತ್ನೆ ಪೊಲೀಸರ ಪಾಲಾಗಿದ್ದಾರೆ.

Advertisement

ರವಿವಾರ ಮುಂಜಾನೆ 5.30ರ ಸುಮಾರಿಗೆ ದಿಮ್ಮತ ಕರುಣರತ್ನೆ ಕುಡಿದ ಮತ್ತಿನಲ್ಲಿ ತ್ರಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ತ್ರಿಚಕ್ರ ವಾಹನ ಸವಾರ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಕರುಣರತ್ನೆ ಅವರನ್ನು ಪೊಲೀಸರನ್ನು ವಶಕ್ಕೆ ಪಡೆದಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಸೋಮವಾರ ಮತ್ತೆ ಕರುಣರತ್ನೆ ಕೋರ್ಟ್ ಗೆ ಹೆಚ್ಚಿನ ವಿಚಾರಣೆಗಾಗಿ ಹಾಜರಾಗಲಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡಾ ದಿಮ್ಮುತ ಕರುಣರತ್ನೆ ಅವರ ವಿಚಾರಣೆಯನ್ನು ಗಮನಿಸುತ್ತಿದೆ. ಮತ್ತು ಅಗತ್ಯ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next