Advertisement

ನೀಲಕಂಠೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸಂಭ್ರಮ

03:46 PM Dec 10, 2021 | Shwetha M |

ತಾಳಿಕೋಟೆ: ಪಟ್ಟಣದ ಕುರುವಿನಶೆಟ್ಟಿ ಸಮಾಜದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಕಳಸೋತ್ಸವ ಮೆರವಣಿಗೆಯು ಗಂಗಸ್ಥಳ ಕಾರ್ಯಕ್ರಮದೊಂದಿಗೆ ಪಟ್ಟಣದಲ್ಲಿ ಗುರುವಾರ ಜರುಗಿತು.

Advertisement

ಕಳಸದ ಮೆರವಣಿಗೆಯು ದೇವಸ್ಥಾನದಿಂದ ಶ್ರೀ ಅಂಬಾಭವಾನಿ ಮಂದಿರದ ವರೆಗೆ ಜರುಗಿ ಗಂಗಸ್ಥಳ ಕಾರ್ಯಕ್ರಮದೊಂದಿಗೆ ಮರಳಿ ದೇವಸ್ಥಾನ ತಲುಪಿತು. ಕಾರ್ತಿಕೋತ್ಸವದ ಅಂಗವಾಗಿ ಬೆಳಗ್ಗೆ 6 ಗಂಟೆಗೆ ಶ್ರೀ ನೀಲಕಂಠೇಶ್ವರ ಗದ್ದುಗೆಗೆ ಮಹಾಪೂಜೆ, ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ವೀರಭದ್ರಪ್ಪ ಹಂದಿಗನೂರ, ಮಲ್ಲು ಕೊಳಕೂರ ಅವರ ನೇತೃತ್ವದಲ್ಲಿ ಜರುಗಿದವು.

ಮೆರವಣಿಗೆಯ ನೇತೃತ್ವವನ್ನು ಸಂಗಪ್ಪ ಹಂದಿಗನೂರ, ನೀಲಕಂಠ ಹಂದಿಗನೂರ, ಸಿದ್ದಗೀರಪ್ಪ ಕೊಳಕೂರ, ಶಿವಶಂಕರ ಹಿಪ್ಪರಗಿ, ಶಿವನಾರಾಯಣ ಹಿಪ್ಪರಗಿ, ಶಿವನಂದ ಊರನ್ನ, ಬಸವರಾಜ ಹೊಟ್ಟಿ, ನಿಂಗಪ್ಪ ಅಲ್ಲಾಪುರ, ಕಾಶಿನಾಥ ಕೊಳಕೂರ, ಆದಪ್ಪ ಕವಡಿಮಟ್ಟಿ, ಸಿದ್ರಾಮ ಅರಬಿ, ಕಾಶಿನಾಥ ಟಕ್ಕಳಕಿ(ಮುನ್ನಾ), ಗುರುವಿಂದ್ರ ಕೊಳಕೂರ, ಸಂಗಮೇಶ ದೇವೂರ, ಚೇತನ ಮಣೂರ, ಸದಾನಂದ ಗುಡ್ಡಾನವರ, ರುದ್ರಪ್ಪ ಮುರಾಳ, ಗುಂಡಪ್ಪ ಹಂದಿಗನೂರ, ಶ್ರೀಶೈಲ ಹಂದಿಗನೂರ, ಗಿರಿಮಲ್ಲಪ್ಪ ತೆಗ್ಗಿನಮನಿ, ಈರಣ್ಣ ಜಾಡಗೌಡರ, ಸುಭಾಸ ಅಲ್ಲಾಪೂರ, ಬಸವರಾಜ ಮಣ್ಣೂರ, ಮಹಾಂತೇಶ ಹೊಸಮನಿ, ಆನಂದ ಹೊಸಮನಿ ಮೊದಲಾದವರು ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next