Advertisement

ಪ್ರೀತಿ, ಶಾಂತಿಯ ಸಂದೇಶ ಹೊತ್ತು ಸಾಗಿದ ಯಾತ್ರಿಕರು

10:05 AM Nov 07, 2019 | Team Udayavani |

ಲಾಹೋರ್‌: ಸಿಕ್ಖ್ ಧರ್ಮದ ಸ್ಥಾಪಕ ಗುರು ನಾನಕ್‌ ದೇವ್‌ ಅವರ 550ನೇ ಜನ್ಮದಿನದ ಆಚರಣೆ ಹಿನ್ನೆಲೆಯಲ್ಲಿ ಸುಮಾರು 2 ಸಾವಿರ ಭಾರತೀಯ ಸಿಕ್ಖ್ ಯಾತ್ರಿಕರು ಮಂಗಳವಾರ ಪಾಕಿಸ್ಥಾನದ ಗುರುದ್ವಾರ ನನ್‌ಕಾನಾ ಸಾಹಿಬ್‌ ತಲುಪಿದ್ದಾರೆ. ಇದೇ ತಿಂಗಳ 9ರಂದು ಐತಿಹಾಸಿಕ ಕರ್ತಾರ್ಪುರ ಕಾರಿಡಾರ್‌ ಲೋಕಾರ್ಪಣೆಗೊಳ್ಳುತ್ತಿರುವುದು ಇವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ನಾವು ಪ್ರೀತಿ ಮತ್ತು ಶಾಂತಿಯ ಸಂದೇಶ ಹೊತ್ತು ತಂದಿದ್ದೇವೆ ಎಂದು ಯಾತ್ರಿಕರು ತಿಳಿಸಿದ್ದಾರೆ.

Advertisement

ವಾಘಾ ಗಡಿಯ ಮೂಲಕ 2,200 ಯಾತ್ರಿಕರು ಪಾಕಿಸ್ಥಾನ ಪ್ರವೇಶಿಸಿದ್ದು, ಅವರನ್ನು ಇವಾಕ್ವೀ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್‌ನ ಹಿರಿಯ ಅಧಿಕಾರಿಗಳು ಬರಮಾಡಿಕೊಂಡಿದ್ದಾರೆ. ಬಳಿಕ ಯಾತ್ರಿಕರು ಗುರುದ್ವಾರ ನನ್‌ಕಾನಾ ಸಾಹಿಬ್‌ಗೆ ತೆರಳಿದ್ದಾರೆ. ವಾಸದ ಅವಧಿಯಲ್ಲಿ ಅವರು ಪಂಜಾಬ್‌ ಪ್ರಾಂತ್ಯದ ಇತರೆ ಗುರುದ್ವಾರಗಳಿಗೂ ಭೇಟಿ ನೀಡಲಿದ್ದಾರೆ.

9ರಂದು ನಡೆಯುವ ಕರ್ತಾರ್ಪುರ ಕಾರಿಡಾರ್‌ ಉದ್ಘಾಟನೆಗೆ ಹಾಗೂ 12ರಂದು ಗುರುನಾನಕ್‌ ದೇವ್‌ರ ಜನ್ಮದಿನದ ಕಾರ್ಯಕ್ರಮಕ್ಕೆ ಅವರು ಸಾಕ್ಷಿಯಾಗಲಿದ್ದಾರೆ. ನ.14ರಂದು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next