Advertisement

ಕರ್ತಾರ್‌ಪುರ ಕಾರಿಡಾರ್‌ : ಭಾರತ-ಪಾಕ್‌ ಅಧಿಕಾರಿಗಳ ಸಭೆ ಮಾ.14ಕ್ಕೆ

01:50 PM Mar 06, 2019 | udayavani editorial |

ಹೊಸದಿಲ್ಲಿ : ಕರ್ತಾರ್‌ಪುರ ಕಾರಿಡಾರ್‌ ಯೋಜನೆಯನ್ನು ಅಂತಿಮ ಗೊಳಿಸುವ ನಿಟ್ಟಿನಲ್ಲಿ ಇದೇ ಮಾರ್ಚ್‌ 14ರಂದು ಭಾರತ-ಪಾಕ್‌ ಅಧಿಕಾರಿಗಳ ಮೊದಲ ಸಭೆಯ ಅಟ್ಟಾರಿ – ವಾಘಾ ದಲ್ಲಿ ನಡೆಯಲಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯ ಇಂದು ಬುಧವಾರ ಹೇಳಿದೆ.

Advertisement

ಈ ಸಭೆಯು ಭಾರತದ ಗಡಿಯ ಈಚೆ ಬದಿಯಲ್ಲಿ ನಡೆಯಲಿದೆ ಎಂದು ವಿದೇಶ ವ್ಯವಹಾರಗಳ ಕಾರ್ಯಾಲಯ ತಿಳಿಸಿದೆ. 

ಇದೇ ಸಭೆಯ ಪಾರ್ಶ್ವದಲ್ಲಿ ಅದೇ ದಿನ ಕಾರಿಡಾರ್‌ ಅಲಾೖನ್‌ಮೆಂಟ್‌ ಗೆ ಸಂಬಂಧಿಸಿದ ತಾಂತ್ರಿಕ ಮಟ್ಟದ ಚರ್ಚೆಯನ್ನು ಇಸ್ಲಾಮಾಬಾದ್‌ ನಡೆಸಬೇಕೆಂದು ಹೊಸದಿಲ್ಲಿ ಪ್ರಸ್ತಾವಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next