Advertisement

ಪಡಿಕ್ಕಲ್ 99 ಔಟ್: ಹಿಮಾಚಲ ಪ್ರದೇಶ ವಿರುದ್ಧ ಸಂಕಷ್ಟದಲ್ಲಿ ಕರ್ನಾಟಕ

10:04 AM Dec 29, 2019 | keerthan |

ಮೈಸೂರು: ಹಿಮಾಚಲ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ 122 ರನ್ ಮುನ್ನಡೆಯಲ್ಲಿರುವ ಕರ್ನಾಟಕ ಡ್ರಾ ಮಾಡುವ ಪ್ರಯತ್ನದಲ್ಲಿದೆ.

Advertisement

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೂರನೇ ದಿನದ ಅಂತ್ಯಕ್ಕೆ ಕರ್ನಾಟಕ ಮೂರು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು.

ದೇವದತ್ತ್ ಪಡಿಕ್ಕಲ್ 69 ರನ್ ಮತ್ತು ಕರುಣ್ ನಾಯರ್ 62 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇಂದಿನ ಆಟದಲ್ಲಿ ನಾಯಕ ಕರುಣ್ ನಾಯರ್ 64 ರನ್ ಗಳಿಸಿ ಬೇಗನೇ ವಿಕೆಟ್ ಒಪ್ಪಿಸಿದರು. ದೇವದತ್ತ್ ಪಡಿಕ್ಕಲ್ 99 ರನ್ ಗಳಿಸಿದ್ದ ವೇಳೆ ವೈಭವ್ ಅರೋರಾ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದು ಒಂದು ರನ್ ನಿಂದ ಶತಕ ವಂಚಿತರಾದರು.

83 ಓವರ್ ನಂತರ ಕರ್ನಾಟಕ ತಂಡ ಆರು ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿ 122 ರನ್ ಮುನ್ನಡೆಯಲ್ಲಿದೆ. ಇಂದು ಅಂತಿಮ ದಿನವಾಗಿದ್ದು ಪಂದ್ಯವನ್ನು ಡ್ರಾ ಮಾಡುವ ಪ್ರಯತ್ನದಲ್ಲಿ ಕರುಣ್ ಬಳಗವಿದೆ.

ಕರ್ನಾಟಕ ಮೊದಲ ಇನ್ನಿಂಗ್ಸ್: 166

Advertisement

ಹಿಮಾಚಲ ಪ್ರದೇಶ ಮೊದಲ ಇನ್ನಿಂಗ್ಸ್: 280

ಕರ್ನಾಟಕ ದ್ವಿತೀಯ ಇನ್ನಿಂಗ್ಸ್: 236/ 6 ( 83 ಓವರ್ ನಷ್ಟಕ್ಕೆ)

Advertisement

Udayavani is now on Telegram. Click here to join our channel and stay updated with the latest news.

Next