Advertisement

ಕರ್ನಾಟಕ ಸಂಘದಿಂದ ಲಾತೂರ್‌ ಜಿಲ್ಲಾಧಿಕಾರಿ ಶ್ರೀಕಾಂತ್‌ರವರ ಭೇಟಿ

02:10 AM Feb 24, 2019 | |

ಮುಂಬಯಿ: ಮಹಾರಾಷ್ಟ್ರ ರಾಜ್ಯದ ಲಾತೂರ್‌ ಜಿಲ್ಲೆಯ ಯುವ ಜಿಲ್ಲಾಧಿಕಾರಿ ಕನ್ನಡಿಗ  ಜಿ. ಶ್ರೀಕಾಂತ್‌ ಐಎಎಸ್‌  ಅವರನ್ನು ಕರ್ನಾಟಕ ಸಂಘ ಮುಂಬಯಿ ಇದರ ವತಿಯಿಂದ ಫೆ. 10ರಂದು ಸಂಘದ ನೂತನ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಹ್ವಾನ ಪತ್ರವನ್ನಿತ್ತು ಅಭಿನಂದಿಸಿ ಗೌರವಿಸಲಾಯಿತು.

Advertisement

ಕರ್ನಾಟಕ ಸಂಘ ಮುಂಬಯಿ ಪ್ರತಿನಿಧಿಗಳಾದ ಉಪಾಧ್ಯಕ್ಷ  ಡಾ| ಈಶ್ವರ ಅಲೆವೂರು, ಗೌರವ ಪ್ರಧಾನ ಕಾರ್ಯದರ್ಶಿ  ಡಾ|  ಭರತ್‌ ಕುಮಾರ್‌ ಪೊಲಿಪು, ಕಟ್ಟಡ ನಿರ್ಮಾಣ ಸಮಿತಿಯ ಸಂಚಾಲಕ  ಓಂದಾಸ್‌ ಕಣ್ಣಂಗಾರ್‌,  ಕತೆಗಾರ ರಾಜೀವ್‌ ನಾಯಕ್‌ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕ ಡಾ| ರಾಮ್‌ ಬೋರ್‌ಗಾಂವ್ಕರ್‌ ಅವರೊಂದಿಗೆ ಇತ್ತೀಚೆಗೆ ಅವರ ಕಚೇರಿಗೆ ಭೇಟಿ ನೀಡಿ ಸಂಘದ ನೂತನ ಸಾಂಸ್ಕೃತಿಕ  ಸಮುಚ್ಚಯದ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಆಗಮಿಸುವಂತೆ ಆಹ್ವಾನಪತ್ರವನ್ನಿತ್ತು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅವರಿಗೆ ಸಂಘದ ಪರವಾಗಿ ಪುಷ್ಪಗೌರವ ಅರ್ಪಿಸಿ, ಸಂಘದ ನೂತನ ಸಾಂಸ್ಕೃತಿಕ ಸಮುಚ್ಚಯದ ಕಿರುಹೊತ್ತಿಗೆಯನ್ನು ನೀಡಲಾಯಿತು.  ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿಯುಳ್ಳ ಜನಪ್ರಿಯ ಜಿಲ್ಲಾಧಿಕಾರಿ ಯಾಗಿರುವ ಶ್ರೀಕಾಂತ್‌ ಮುಂಬಯಿ ಕರ್ನಾಟಕ ಸಂಘದ ನಾಡು-ನುಡಿಯನ್ನು ಬಿಂಬಿ ಸುವ ಹಾಗೂ ಸಾಮಾಜಿಕ, ಶೈಕ್ಷಣಿಕ ಕಾರ್ಯಚಟುವಟಿಕೆಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತಮ್ಮಿಂದಾದ ಸಹಕಾರ ಸದಾ ನೀಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next