Advertisement

Karnataka: ಹಾಲಿನ ಪ್ರೋತ್ಸಾಹ ಧನ ಬಾಕಿ: ಸಚಿವ ಕೆ.ವೆಂಕಟೇಶ್‌ ಒಪ್ಪಿಗೆ

10:55 PM Jul 14, 2023 | Team Udayavani |

ಬೆಂಗಳೂರು: ಹಾಲಿನ ದರ ಹೆಚ್ಚಳಕ್ಕೆ ಆತುರ ತೋರುತ್ತಿರುವ ಸರಕಾರ, ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನಕ್ಕೆ ಅನುದಾನ ಬಿಡುಗಡೆ ಮಾಡಲು ಹಿಂದು ಮುಂದು ನೋಡುತ್ತಿದೆ.

Advertisement

ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌ ಅವರು ಈ ಸತ್ಯವನ್ನು ಒಪ್ಪಿಕೊಂಡಿದ್ದು, ಮಾರ್ಚ್‌ ತಿಂಗಳ ಪ್ರೋತ್ಸಾಹ ಧನ ಇದುವರೆಗೆ ಬಿಡುಗಡೆ ಆಗಿಲ್ಲ. ಆಗಸ್ಟ್‌ ತಿಂಗಳಲ್ಲಿ ಎರಡನೇ ಕಂತಿನ ಅನುದಾನ ಬಿಡುಗಡೆಯಾದ ಬಳಿಕ ಮಾರ್ಚ್‌ ತಿಂಗಳ ಪ್ರೋತ್ಸಾಹಧನ ಕೊಡುವುದಾಗಿ ಹೇಳಿದ್ದಾರೆ.

ರಾಜ್ಯದ 15,515 ಹಾಲು ಉತ್ಪಾದಕರ ಸಂಘಗಳಿಂದ ಪ್ರತಿ ತಿಂಗಳ 30ನೇ ತಾರೀಕಿನವರೆಗೆ ಪೂರೈಕೆಯಾದ ಹಾಲಿನ ಪ್ರಮಾಣ ಮತ್ತಿತರ ವಿವರಗಳು ಮುಂದಿನ ತಿಂಗಳ 20ರ ವೇಳೆಗೆ ಕ್ಷೀರಸಿರಿ ಮೂಲಕ ಕೆಎಂಎಫ್ಗೆ ತಲುಪುತ್ತದೆ. ಬಳಿಕ ಖಜಾನೆ-2ಕ್ಕೆ ಬಿಲ್‌ಗ‌ಳನ್ನು ಕಳುಹಿಸಿದ ಮಂಜೂರಾತಿ ಆದೇಶ ಪಡೆದು ಪಾವತಿಗೆ ಕ್ರಮ ವಹಿಸುವುದರಿಂದ ವಿಳಂಬವಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆಂದು ಸರಕಾರ ಮೊದಲ ಕಂತಿನಲ್ಲಿ ಬಿಡುಗಡೆ ಮಾಡಿದ್ದ ಹಣ ಖರ್ಚಾಗಿದ್ದು, ಎರಡನೇ ಕಂತಿನ ಅನುದಾನಕ್ಕಾಗಿ ಕಾಯುತ್ತಿದ್ದೇವೆ. ಇದು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದ್ದು, ಬಾಕಿ ಪ್ರೋತ್ಸಾಹಧನವನ್ನು ಪಾವತಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಬೇಕಿದೆ 10 ಕೋಟಿ ರೂ. ಹೆಚ್ಚುವರಿ ಅನುದಾನ
ತಿಂಗಳಿಗೆ 7.56 ಲಕ್ಷ ಹಾಲು ಉತ್ಪಾದಕರು 1,900 ಲಕ್ಷ ಲೀಟರ್‌ನಷ್ಟು ಹಾಲನ್ನು ಕೆಎಂಎಫ್ಗೆ ಪೂರೈಸುತ್ತಿದ್ದಾರೆ. ಇಷ್ಟು ರೈತರಿಗೆ ಪ್ರೋತ್ಸಾಹಧನ ನೀಡಲು ಮಾಸಿಕ ಕನಿಷ್ಠ 90 ಕೋಟಿ ರೂ. ಬೇಕಾಗುತ್ತದೆ. 2023-24 ನೇ ಸಾಲಿಗೆ ಸಾಮಾನ್ಯ ವರ್ಗದಡಿ ರೈತರಿಗೆ ಪ್ರೋತ್ಸಾಹಧನ ನೀಡಲು 1080 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಆದರೆ, ಸಾಮಾನ್ಯ ವರ್ಗದಡಿ ಫ‌ಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು, ಮಾಸಿಕ ಪ್ರೋತ್ಸಾಹ ಧನವು 100 ಕೋಟಿ ರೂ.ವರೆಗೆ ಏರುತ್ತಿದೆ. ಅನುದಾನದ ಕೊರತೆ ಇರುವುದರಿಂದ ಹೆಚ್ಚುವರಿ ಅನುದಾನ ಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next