Advertisement

Uttar Pradesh ನಕಲಿ ವಿಮೆ ಜಾಲಕ್ಕೆ ಕರ್ನಾಟಕ ನಂಟು!: 11 ಮಂದಿ ಸೆರೆ

11:16 PM Jul 07, 2024 | Team Udayavani |

ಲಕ್ನೋ: ಕಾಲ್‌ ಸೆಂಟರ್‌ ಮೂಲಕ ನಕಲಿ ಇನ್ಸುರೆನ್ಸ್‌ ಪಾಲಿಸಿ ಹಾಗೂ ಸಾಲ ನೀಡಿ ಬಹುಕೋಟಿ ರೂ. ವಂಚಿಸಿದ್ದ 9 ಮಹಿಳೆಯರು ಸೇರಿ 11 ಜನರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ವಂಚಕರ ಜಾಲಕ್ಕೆ ಕರ್ನಾಟಕದ ನಂಟಿದೆ.

Advertisement

ವಿಮಾ ಪಾಲಿಸಿ ಏಜೆಂಟ್‌ಗಳಾಗಿದ್ದ ಆಶಿಶ್‌ ಕುಮಾರ್‌, ಜೀತೆಂದ್ರ ವರ್ಮಾ ಹಗರಣದ ಮಾಸ್ಟರ್‌ಮೈಂಡ್ ಗಳು. ಆರೋಪಿಗಳು ನಕಲಿ ಇನ್ಸುರೆನ್ಸ್‌ ಕಂಪನಿ ಸ್ಥಾಪಿಸಿ, 9 ಮಹಿಳೆಯರನ್ನು ನೇಮಿಸಿ ಕೊಂಡಿದ್ದರು. ನಕಲಿ ಆಧಾರ್‌ ಕಾರ್ಡ್‌ ಬಳಸಿ ಸಿಮ್‌ ಕಾರ್ಡ್‌ ಪಡೆದ ಆರೋಪಿಗಳು, ಗ್ರಾಹಕರಿಗೆ ಕರೆ ಮಾಡಿ, ಇನ್ಸುರೆನ್ಸ್‌ ಪಾಲಿಸಿ, ಸಾಲ ತೆಗೆದುಕೊಂಡರೆ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದರು. 1 ವರ್ಷದಲ್ಲಿ ಕೋಟ್ಯಂತರ ಹಣ ವಂಚಿಸಿದ್ದಾರೆ.

ರಾಜ್ಯದ ನಂಟು
ಕರ್ನಾಟಕದ ಅರವಿಂದ್‌ ಎಂಬವರ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಖಾತೆಯನ್ನು 10 ಸಾವಿರ ರೂ.ಗೆ ಬಾಡಿಗೆ ಪಡೆದು ಕೊಂಡಿದ್ದರು. ವಂಚ ನೆಯ ಹಣ ವೆಲ್ಲ ಆ ಖಾತೆಗೆ ಜಮೆ ಆಗುತ್ತಿತ್ತು. ಆರೋಪಿಗಳು ಇಂಡಿಯಾ ಮಾರ್ಟ್‌ನಿಂದ 2500 ರೂ.ಗೆ ಆನ್‌ಲೈನ್‌ ಮೂಲಕ ಗ್ರಾಹಕರ ಪಟ್ಟಿ ಪಡೆದು, ಕರೆ ಮಾಡಿ, ವಂಚನೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next