Advertisement

ಪರಪ್ಪನ ಅಗ್ರಹಾರ ಕೇಸ್;ಸರ್ಕಾರಕ್ಕೆ 2ನೇ ವರದಿ ಸಲ್ಲಿಸಿದ ಡಿಐಜಿ ರೂಪಾ?

03:41 PM Jul 15, 2017 | Sharanya Alva |

ಬೆಂಗಳೂರು:ಕಾರಾಗೃಹ ಇಲಾಖೆಯ ಅಕ್ರಮವನ್ನು ಬಯಲಿಗೆಳೆದಿದ್ದ ಡಿಐಜಿ ರೂಪಾ ಅವರಿಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದ್ದ ಬೆನ್ನಲ್ಲೇ ಡಿ. ರೂಪಾ ಅವರು ಶನಿವಾರ ಕಾರಾಗೃಹ ಅವ್ಯವಹಾರದ ಕುರಿತ 2ನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

Advertisement

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಕರ್ಮಕಾಂಡದ ಬಗ್ಗೆ ಡಿಐಜಿ ಡಿ.ರೂಪಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ 2ನೇ ವರದಿಯನ್ನು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತ ಗೆಳತಿ ಶಶಿಕಲಾ ಹಾಗೂ ಛಾಪಾ ಕಾಗದ ಹಗರಣದ ತೆಲಗಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಅಲ್ಲದೇ ಕಾರಾಗೃಹ ಡಿಜಿ ಕೋಟ್ಯಂತರ ರೂಪಾಯಿ ಲಂಚ ಸ್ವೀಕರಿಸಿರುವುದಾಗಿ ಡಿಐಜಿ ರೂಪಾ ಅವರು ನೀಡಿದ್ದ ವರದಿಯಲ್ಲಿ ಉಲ್ಲೇಖಿಸಿದ್ದರು.

ಕಾರಾಗೃಹದಲ್ಲಿನ ಅವ್ಯವಹಾರ, ವಿಶೇಷ ಆತಿಥ್ಯದ ಪ್ರಕರಣ ಭಾರೀ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ರಾಜ್ಯ ಸರ್ಕಾರ ಡಿ ರೂಪಾ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾದ ನಂತರ ಡಿಜಿ ಸತ್ಯನಾರಾಯಣ ರಾವ್ ಅವರಿಗೂ ನೋಟಿಸ್ ನೀಡಿತ್ತು.
 

Advertisement

Udayavani is now on Telegram. Click here to join our channel and stay updated with the latest news.

Next