Advertisement

ಕರ್ನಾಟಕಕ್ಕೆ 504 ಕೋಟಿ ಪರಿಹಾರ

11:56 PM Dec 30, 2021 | Team Udayavani |

ಹೊಸದಿಲ್ಲಿ: ಮಳೆ ಮತ್ತು ಪ್ರವಾಹದಿಂದ ಕಂಗೆಟ್ಟ ಕರ್ನಾಟಕಕ್ಕೆ ಕೇಂದ್ರ ಸರಕಾರ‌ದ ವತಿಯಿಂದ 504.06 ಕೋಟಿ ರೂ. ನೆರವನ್ನು ಗುರುವಾರ ಪ್ರಕಟಿಸಲಾಗಿದೆ.

Advertisement

ರಾಜ್ಯ ಸರಕಾರವು ಒಟ್ಟು 965 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿ ತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿನ ಉನ್ನತ ಮಟ್ಟದ ಸಮಿತಿ ಒಟ್ಟು ಆರು ರಾಜ್ಯಗಳಿಗೆ 3,063.21 ಕೋಟಿ ರೂ. ಮೊತ್ತವನ್ನು ಪರಿಹಾರವಾಗಿ ನೀಡುವ ಪ್ರಸ್ತಾವಕ್ಕೆ ಅನುಮತಿ ನೀಡಿದೆ.ಮಧ್ಯಪ್ರದೇಶಕ್ಕೆ 600.50 ಕೋಟಿ ರೂ., ಉತ್ತರಾಖಂಡಕ್ಕೆ 187.18 ಕೋಟಿ ರೂ.ಗಳನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ನೀಡಲು ಅನುಮೋದನೆ ನೀಡಲಾಗಿದೆ.

ತೌಕ್ತೇ ಚಂಡ ಮಾರುತದ ಹಾವಳಿಗೆ ತುತ್ತಾಗಿದ್ದ ಗುಜರಾತ್‌ಗೆ 1,133,35 ಕೋಟಿ ರೂ., ಯಾಸ್‌ ಚಂಡಮಾರುತ ದಿಂದ ತತ್ತರಿಸಿದ್ದ ಪಶ್ಚಿಮ ಬಂಗಾಲಕ್ಕೆ 586.59 ಕೋಟಿ ರೂ. ಪರಿಹಾರ ನೀಡಲು ಶಿಫಾರಸು ಮಾಡಲಾಗಿದೆ. 2021-22ನೇ ಸಾಲಿನಲ್ಲಿ 28 ರಾಜ್ಯಗಳಿಗೆ 17,747.20 ಕೋಟಿ ರೂ. ಪರಿಹಾರವಾಗಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next