Advertisement

Karnataka Election ಮತದಾನದ ದಿನ ಸಿಗಂದೂರಿಗೆ ಬರದಿರಿ

04:05 PM Apr 30, 2023 | Team Udayavani |

ಸಾಗರ: ಮೇ 10 ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆಯುವುದರಿಂದ ಸಿಗಂದೂರು ದೇವಾಲಯದ ಎಲ್ಲ ಸಿಬಂದಿಗಳಿಗೂ ಮತದಾನಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ.

Advertisement

ಮತದಾನದ ದಿನದಂದು ದೇವಿಯ ಭಕ್ತಾಧಿಗಳು, ಸಾರ್ವಜನಿಕರು ಶ್ರೀಕ್ಷೇತ್ರಕ್ಕೆ ಆಗಮಿಸುವ ಅಭಿಲಾಷೆಯನ್ನು ಹೊಂದಿದ್ದರೆ ಯಾತ್ರಾದಿನವನ್ನು ಮುಂದೂಡಿ ತಮ್ಮ ತಮ್ಮ ಗ್ರಾಮದ ಮತಗಟ್ಟೆಯಲ್ಲಿ ತೆರಳಿ ಮತದಾನ ಮಾಡಲು ಕೋರುತ್ತೇವೆ ಎಂದು ತಾಲೂಕಿನ ಸಿಗಂದೂರು ಶ್ರೀಕ್ಷೇತ್ರದ ಅನುವಂಶಿಕ ಧರ್ಮಾಧಿಕಾರಿ ಡಾ. ಎಸ್. ರಾಮಪ್ಪ ಮನವಿ ಮಾಡಿಕೊಂಡಿದ್ದಾರೆ.

ಮೌಲ್ಯಗಳ ಉಳಿವಿಗೆ ತಪ್ಪದೇ ಮತದಾನ ಮಾಡೋಣ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಂಕಣ ಧರಿಸೋಣ. ನಮ್ಮ ಗಣತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಸಬಲಗೊಳಿಸಲು ಭಾರತದ ಪ್ರಜೆಗಳಾದ ನಾವು ಯಾವುದೇ ಅಮಿಷಗಳಿಗೆ ಒಳಗಾಗದೆ ಸಂವಿಧಾನಬದ್ಧವಾದ ಹಕ್ಕನ್ನು ಚಲಾಯಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next