Advertisement

ನಿಮ್ಮ ಯಡಿಯೂರಪ್ಪ ಸಿಎಂ ಆಗ್ಬೇಕಂದ್ರೆ ಪ್ರಸಾದ್‌ ಗೆಲ್ಬೇಕು

12:59 PM Apr 05, 2017 | Team Udayavani |

ನಂಜನಗೂಡು: ನಿಮ್ಮ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಬೇಕಾದರೆ ಇಲ್ಲಿ ಶ್ರೀನಿವಾಸ ಪ್ರಸಾದ ಗೆಲ್ಲಲೇ ಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜನತೆಗೆ ತಾಕೀತು ಮಾಡಿದರು.

Advertisement

ಮಂಗಳವಾರ ಉಪ ಚುನಾವಣಾ ಪ್ರಚಾರ ವನ್ನು ಕ್ಷೇತ್ರದ ಚಿನ್ನದ ಗುಡಿ ಹುಂಡಿಯಿಂದ ಪ್ರಾರಂಭ ಮಾಡಿದ ಅವರು ನಂತರ ಬದನವಾಳು ದೇವನೂರು ಚಿಕ್ಕ ಕೌಲಂದೆ ದೊಡ್ಡ ಕಕೌಲಂದೆ ಕೃಷ್ಣರಾಜಪುರ, ಗಟವಾಡಿ ಗಟವಾಡಿ ಪುರಗಳಲ್ಲಿ ಮತಯಾಚನೆ ನಡೆಸಿ ಮಾತನಾಡಿದರು.

ಸಾರ್ವಜನಿಕ ಚುನಾವಣೆಯ ಪೂರ್ವಭಾವಿ ಯಾಗಿ ನಡೆಯುತ್ತಿರುವ ಈ ಚುನಾವಣೆಯ ಮಹತ್ವವನ್ನು ವಿವರಿಸಿದ ಅವರು ನಿಮ್ಮ ಈ ಅಭಿಮಾನ ಪ್ರಸಾದರ ಪಾಲಿಗೆ ಮತವಾಗಿ ಅವರು ವಿಜೇತರಾಗಬೇಕು ಹಾಗಾದಾಗ ಮಾತ್ರ ಈ ಯಡಿಯೂರಪ್ಪ ಮತ್ತೆ ಮುಖ್ಯ ಮಂತ್ರಿಯಾಗಲು ಸಾಧ್ಯ ಎಂದರು.

ರಾಯರೆಡ್ಡಿ ಕಂಪನಿ ಬೀಡುಬಿಟ್ಟಿದೆ ಹುಷಾರ್‌: ಈ ಕೌಲಂದೆ ಸುತ್ತಮುತ್ತ ರಾಯರೆಡ್ಡಿ ಹಾಗೂ ಸಿದ್ದರಾಮಯ್ಯರ ಕಂಪನಿ ಬೀಡು ಬಿಟ್ಟಿದೆ ಜನತೆ ಇವರ ಬಗ್ಗೆ ಹುಷಾರಾಗಿರಬೇಕು. ಆಡಳಿತ ಪಕ್ಷದ ಮೋಸದ ಬಲೆಗೆ ಬೀಳದೆ ವಿವಿಧ ಸಮಾಜದ ಎಲ್ಲರನ್ನೂ ಒಂದಾಗಿಸಿ ಬಿಜೆಪಿಯ ವೋಟಿನ ಬುಟ್ಟಿ ತುಂಬಿಸಬೇಕು ಎಂದು ಮನವಿ ಮಾಡಿದರು.

ಕೇಸರಿ ರಥ ಏರಿದ ಮುಸ್ಲಿಮರು: ಕೌಲಂದೆ ಯಲ್ಲಿ ಮುಸ್ಲಿಂ ಸಮುದಾಯದವರು ಯಡಿ ಯೂರಪ್ಪನವರ ಪ್ರಚಾರದ ಬಿಜೆಪಿಯ ಕೇಸರಿ ರಥ ಏರುವುದರ ಮುಖಾಂತರ ತಾಲೂಕಿನ ರಾಜಕಾರಣದಲ್ಲಿನ ಹೊಸ ಅಧ್ಯಾಯಕ್ಕೆ ಕಾರಣರಾದರು.

Advertisement

ಬಿಎಸ್‌ವೈ ಅವರೊಡನೆ ಇಂದು ಪ್ರಚಾರ ದಲ್ಲಿ ವಿರೋಧ ಪಕ್ಷದ ನಾಯಕ ಈಶ್ವರಪ್ಪ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ, ಹರತಾಳು ಹಾಲಪ್ಪ, ಎಸ್‌. ಮಹದೇವಯ್ಯ, ಕೆ.ಕೆ ಜಯದೇವು, ತಾಪಂ ಸದಸ್ಯರಾದ ಶಿವಣ್ಣ, ಬದನವಾಳು ರಾಮು, ಶಿವಪ್ಪ ದೇವರು, ಕೆ.ಆರ್‌ ಪುರದ ಸಿದ್ದಪ್ಪ,  ಚಿಕ್ಕಮಂಗಳೂರು ಜಿಪಂ ಅಧ್ಯಕ್ಷೆ ಚೈತ್ರಾ, ಕೌವಲಂದೆ ಗ್ರಾಪಂ ಉಪಾಧ್ಯಕ್ಷ ಜಾವೀದ್‌ ಅಹ್ಮದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next