Advertisement

ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಸುಭದ್ರ ಆದರೆ ಸಿಎಂ ಕುರ್ಚಿ ಅಭದ್ರ !

10:00 AM Dec 18, 2019 | sudhir |

ಮುದಗಲ್ಲ (ರಾಯಚೂರು): “ರಾಜ್ಯದಲ್ಲಿ ಉಪ ಚುನಾವಣೆ ನಂತರ ಲಭಿಸಿದ ಸ್ಥಾನಗಳಿಂದ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಆದರೆ ಸಿಎಂ ಕುರ್ಚಿ ಅಭದ್ರವಾಗಿದೆ’ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಆದರೆ, ಕೊನೆವರೆಗೂ ಸಿಎಂ ಯಡಿಯೂರಪ್ಪ ಅಧಿಕಾರದಲ್ಲಿರುತ್ತಾರೆ ಎಂಬುದನ್ನು ಹೇಳಲಾಗದು. ಬಿಜೆಪಿಯಲ್ಲಿ ಏನಾದರೂ ಆಗಬಹುದು. ಬೇರೆಯವರನ್ನು ಸಿಎಂ ಮಾಡಿದರೂ ಮಾಡಬಹುದು. ತಾನು ಇನ್ನೊಮ್ಮೆ ಕಾಂಗ್ರೆಸ್‌ನಿಂದ ಶಾಸಕನಾದರೂ ನಿರಂತರವಾಗಿ ತಾನು ಬಿಜೆಪಿಗೆ ಹೋಗುತ್ತೇವೆ ಎನ್ನುವ ವದಂತಿ ಸಾಮಾನ್ಯ. ಇನ್ನು ಶಾಸಕ ಹೂಲಗೇರಿ ಬಿಜೆಪಿ ಸೇರ್ಪಡೆ ಕುರಿತು ತನಗೆ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next