Advertisement

ಬಿಜೆಪಿ ಕಾರ್ಯಕಾರಣಿ ‘ಸಂತೋಷ’ ಕಸಿಯುವುದೇ ರಾಜೀನಾಮೆ-ಪರ್ಸಂಟೇಜ್ ಕರಿಛಾಯೆ?

08:41 AM Apr 16, 2022 | Team Udayavani |

ಬೆಂಗಳೂರು: ಕೆ.ಎಸ್.ಈಶ್ವರಪ್ಪ ರಾಜೀನಾಮೆ ಪ್ರಹಸನದ ಕರಿಛಾಯೆಯ ಮಧ್ಯೆಯೇ ಬಿಜೆಪಿಯ ಬಹುನಿರೀಕ್ಷಿತ ಕಾರ್ಯಕಾರಿಣಿ ಸಭೆ ಇಂದು ವಿಜಯನಗರದಲ್ಲಿ ಉದ್ಘಾಟನೆಗೊಳ್ಳಲಿದೆ.

Advertisement

ಕಾರ್ಯಕಾರಿಣಿ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸುತ್ತಿಲ್ಲ. ಹೀಗಾಗಿ ಬೆಳಿಗ್ಗೆ 9 ಗಂಟೆಗೆ ಕಟೀಲ್ ಅವರಿಂದ ಗೋ ಪೂಜೆ ನಡೆಯಲಿದ್ದು ನಾಳೆ ಬೆಳಿಗ್ಗೆ 11 ಗಂಟೆಗೆ ಜೆ.ಪಿ ನಡ್ಡಾ ಆಗಮಿಸುತ್ತಾರೆ.

ಬೆಳಗ್ಗೆ 11 ಗಂಟೆಗೆ ಕಾರ್ಯಕಾರಣಿಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸುವರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸಭೆ ನಡೆಸುವರು.

ಇದನ್ನೂ ಓದಿ:ಸೋನಿಯಾ ಗಾಂಧಿ ಡಿಜಿಟಲ್‌ ನೋಂದ‌ಣಿ : 2.6 ಕೋಟಿ ಕಾಂಗ್ರೆಸ್‌ ಕಾರ್ಯಕರ್ತರ ಹೆಸರು ನೋಂದಾವಣೆ

ಕಾರ್ಯಕಾರಣಿ ಸಂದರ್ಭದಲ್ಲೇ ಕಾಂಗ್ರೆಸ್ ನ 40% ಕಮಿಷನ್ ಆರೋಪ‌ ಬಿಜೆಪಿಗೆ ಇರಿಸು ಮುರಿಸು ತಂದಿದೆ. ಇದರಿಂದ ಸಿಟ್ಟಾಗಿರುವ ಬಿಜೆಪಿ‌ ನಾಯಕರು ಕಾಂಗ್ರೆಸ್ ಅವಧಿಯಲ್ಲಿನ ಅಕ್ರಮ ದಾಖಲೆ ಬಿಡುಗಡೆಗೆ ಚಿಂತನೆ ನಡೆಸಿದ್ದಾರೆ. ಬಿಜೆಪಿಯ‌‌ ಮುಂದಿನ ಹೋರಾಟ ಹೇಗಿರಬೇಕೆಂಬ ಬಗ್ಗೆ ಈ ಸಭೆಯಲ್ಲಿ ಸ್ಪಷ್ಟ ಸೂಚನೆ ಲಭಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next