Advertisement

“ಕಾರ್ನಾಡ್‌ ಸಮಾಜ ತಿದ್ದಿದ ವೈದ್ಯ’: ವೈದೇಹಿ

11:52 AM Jun 12, 2019 | Vishnu Das |

ಉಡುಪಿ: ಗಿರೀಶ್‌ ಕಾರ್ನಾಡ್‌ ಅವರು ಪಿ. ಲಂಕೇಶ್‌, ಶಿವರಾಮ ಕಾರಂತ ಮತ್ತು ಯು.ಆರ್‌. ಅನಂತಮೂರ್ತಿ ಅವರಂತೆ ಸಮಾಜವನ್ನು ತಿದ್ದುವ ವೈದ್ಯರಾಗಿದ್ದರು ಎಂದು ಸಾಹಿತಿ ವೈದೇಹಿ ಅಭಿಪ್ರಾಯಪಟ್ಟರು.

Advertisement

ಗೋವಿಂದ ಪೈ ಸಂಶೋಧನ ಕೇಂದ್ರದ ಧ್ವನ್ಯಾಲೋಕದಲ್ಲಿ ಮಂಗಳವಾರ ರಥಬೀದಿ ಗೆಳೆಯರು ಉಡುಪಿ ಸಂಘಟನೆಯ ವತಿಯಿಂದ ಜರಗಿದ ಕಾರ್ಯಕ್ರಮದಲ್ಲಿ ಅವರು ಗಿರೀಶ್‌ ಕಾರ್ನಾಡ್‌ ಅವರಿಗೆ ನುಡಿನಮನ ಸಲ್ಲಿಸಿದರು. ಚಿಂತಕ ಜಿ. ರಾಜಶೇಖರ್‌ ಮಾತನಾಡಿದರು.

ನಿವೃತ್ತ ಪ್ರಾಂಶುಪಾಲ ನಟರಾಜ್‌ ದೀಕ್ಷಿತ್‌, ಪ್ರೊ| ಫ‌ಣಿರಾಜ್‌, ರಥಬೀದಿ ಗೆಳೆಯರು ಸಂಘಟನೆ ಅಧ್ಯಕ್ಷ ಮುರಲೀಧರ ಉಪಾಧ್ಯ, ವರದೇಶ ಹಿರೇಗಂಗೆ, ಜಿ.ಪಿ. ಪ್ರಭಾಕರ್‌ ಮೊದಲಾದವರು ನುಡಿನಮನ ಸಲ್ಲಿಸಿದರು. ಸುಬ್ರಹ್ಮಣ್ಯ ಜೋಶಿ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next