Advertisement

ಶ್ರೀಕೃಷ್ಣ ವಾಣಿ ದರ್ಶನ: ಮರ್ಡರ್‌ ಮಿಸ್ಟರಿ ಬಿಡುಗಡೆಗೆ ರೆಡಿ

02:37 PM Sep 20, 2021 | Team Udayavani |

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಮುಖವಾಣಿ ಯಿಂದ ಬಂದ “ಕರ್ಮಣ್ಯೇ ವಾಧಿಕಾರಸ್ತೇ’ ಎಂಬ ಪದವನ್ನು ನೀವೆಲ್ಲ ಕೇಳಿರುತ್ತೀರಿ. ಈಗ ಇದೇ “ಕರ್ಮಣ್ಯೇವಾಧಿಕಾರಸ್ತೇ’ ಸಿನಿಮಾವೊಂದರ ಟೈಟಲ್‌ ಆಗಿ ತೆರೆಗೆ ಬರುವ ತಯಾರಿಯಲ್ಲಿದೆ.

Advertisement

ಹೌದು, ಈಗಾಗಲೇ ಸದ್ದಿಲ್ಲದೆ ತನ್ನ ಚಿತ್ರೀಕರಣ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ಕರ್ಮಣ್ಯೇವಾಧಿಕಾರಸ್ತೇ’ ಚಿತ್ರದ ಆಡಿಯೋ ಮತ್ತು ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು.

ನವನಟ ಪ್ರತೀಕ್‌ ಸುಬ್ರಮಣಿ ನಾಯಕನಾಗಿ, ದಿವ್ಯಾ ನಾಯಕಿಯಾಗಿ ಉಳಿದಂತೆ ನೇಪಾಳದ ಡೋಲ್ಮ, ಅಭಿಷೇಕ್‌ ಶೆಟ್ಟಿ, ನಾಟ್ಯ ರಂಗ, ಉಗ್ರಂ ಮಂಜು, ನಟನ ಪ್ರಶಾಂತ್‌ ಮೊದಲಾದವರು “ಕರ್ಮಣ್ಯೇವಾಧಿಕಾರಸ್ತೇ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಭಜರಂಗಿಯಲ್ಲಿ ರಗಡ್‌ ಶ್ರುತಿ: ಹೆಚ್ಚಾಗುತ್ತಿದೆ ಸಿನಿಮಾ ನಿರೀಕ್ಷೆ

ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಧಾರವಾಡ ಪಶ್ಚಿಮ ಶಾಸಕ ಅರವಿಂದ್‌ ಬೆಲ್ಲದ್‌ ಹಾಜರಿದ್ದು, ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಶಾಸಕ ಅರವಿಂದ್‌ ಬೆಲ್ಲದ್‌, “ಈ ಚಿತ್ರದ ನಾಯಕ ಪ್ರತೀಕ್‌ ನನಗೆ ಚಿಕ್ಕಂದಿನಿಂದಲೂ ಪರಿಚಿತ. ಮೊದಲು ಅವನು ಸಿನಿಮಾಕ್ಕೆ ಯಾಕೆ ಬರುತ್ತಾನೆ. ಅವನಿಗ್ಯಾಕೆ ಸಿನಿಮಾ ಸಹವಾಸ ಅಂದುಕೊಂಡಿದೆ. ಆದ್ರೆ ಟ್ರೇಲರ್‌ ನೋಡಿದ ನಂತರ ಈ ಸಿನಿಮಾದ ಬಗ್ಗೆ ಭರವಸೆ ಬಂತು. ಟ್ರೇಲರ್‌ನಲ್ಲಿ ಎಲ್ಲರ ಶ್ರಮ ಕಾಣುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದರು.

Advertisement

ಚಿತ್ರದ ಬಗ್ಗೆ ಮಾತನಾಡಿದ ನಾಯಕ ಪ್ರತೀಕ್‌ ಸುಬ್ರಮಣಿ, “ಇಲ್ಲಿಯವರೆಗೆ ನಾನು ಚಿತ್ರರಂಗದ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು ಕೊಂಡಿದ್ದೇನೆ. ಸಿನಿಮಾ ಶುರುವಾದ ನಂತರ ಕೊರೊನಾ ಅಡೆತಡೆ ಎದುರಾಯಿತು. ಕೊನೆಗೂ ಅಂದು ಕೊಂಡಂತೆ ಸಿನಿಮಾ ರಿಲೀಸ್‌ ಹಂತಕ್ಕೆ ಬಂದಿದೆ. ಟ್ರೇಲರ್‌ಗಿಂತ ಹತ್ತುಪಟ್ಟು ಸಿನಿಮಾ ಚೆನ್ನಾಗಿದೆ ಎಂಬ ಭರವಸೆ ಇದೆ. ನೋಡಿ ಹರಸಿ’ ಎಂದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀಹರಿ ಆನಂದ್‌, “ನಾಯಕ ಪ್ರತೀಕ್‌ ಮತ್ತು ನಾನು ಸಿನಿರಂಗದಲ್ಲಿ ಒಟ್ಟಿಗೆ ಸೈಕಲ್‌ ತುಳಿದವರು. ಕಥೆ ಸಿದ್ದಮಾಡಿಕೊಂಡಾಗ ಚಿತ್ರದ ಶೀರ್ಷಿಕೆ ಎನ್ನಿಸಬೇಕು ಎಂಬ ಚರ್ಚೆಯಾದಾಗ, ಕೊನೆಗೆ ಪ್ರತೀಕ್‌ ಈ ಟೈಟಲ್‌ ಸೂಚಿಸಿದರು. ಸಿನಿಮಾ ನಿರ್ಮಿಸಲು ನಿರ್ಮಾಪಕರ ಹುಡುಕಾಟದಲ್ಲಿದ್ದಾಗ, ಆಪತ್ಭಾಂಧವನಂತೆ ಬಂದವರು ರಮೇಶ್‌ ರಾಮಯ್ಯ. ಇದೊಂದು ಮರ್ಡರ್‌ ಮಿಸ್ಟರಿ ಸಬ್ಜೆಕ್ಟ್ ಸಿನಿಮಾ. ಬೆಂಗಳೂರು ಮತ್ತು ದಾಂಡೇಲಿ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ’ ಎಂದು ಚಿತ್ರದ ಕಥಾಹಂದರ ಮತ್ತು ಶೂಟಿಂಗ್‌ ಬಗ್ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next