Advertisement

ಕಾರ್ಕಳ: ವಿಷ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

09:41 AM Oct 12, 2019 | Sriram |

ಕಾರ್ಕಳ: ಕಾರ್ಕಳ ಎಂಪಿಎಂ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ನಲ್ಲೂರು ಗ್ರಾಮದ ಹರೀಶ್‌ (20) ಶುಕ್ರವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Advertisement

ಶುಕ್ರವಾರ ಕಾಲೇಜಿಗೆ ತರಗತಿಗೆ ಹಾಜರಾಗದ ಹರೀಶ್‌ ಗೆಳೆಯನ ಜತೆ ಬೈಕ್‌ನಲ್ಲಿ ದೂಪದಕಟ್ಟೆಯತ್ತ ತೆರಳಿದ್ದನು. ಈ ವೇಳೆ ಅತ್ತೂರು ಬಳಿ ಬೈಕ್‌ ನಿಲ್ಲಿಸುವಂತೆ ಸವಾರನಿಗೆ ತಿಳಿಸಿದ ಹರೀಶ್‌ ಆತನನ್ನು ಮುಂದುವರಿಯುವಂತೆ ಹೇಳಿ ಬೈಕ್‌ನಿಂದ ಇಳಿದನು. ಬೈಕ್‌ ಸವಾರ ಸ್ವಲ್ಪ ದೂರ ಹೋಗಿ ವಾಪಸಾಗುವ ವೇಳೆ ಹರೀಶ್‌ ರಸ್ತೆಯಲ್ಲಿ ಹೊರಳಾಡುತ್ತಿರುವುದು ಕಂಡು ಬಂದಿದ್ದು, ತಕ್ಷಣ ಆತನನ್ನು ಉಡುಪಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಬೆಳ್ಮಣ್‌ ತಲುಪುವಾಗ ಕೊನೆಯುಸಿರೆಳೆದನು ಎನ್ನಲಾಗಿದೆ.

ಹರೀಶ್‌ ತಂದೆ ಜಗನ್ನಾಥ, ತಾಯಿ ಚಂಪಾ, ಇಬ್ಬರು ಸಹೋದರರನ್ನು ಅಗಲಿದ್ದಾನೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಾವಂತ ವಿದ್ಯಾರ್ಥಿ
ಅಂತಿಮ ಬಿಎ ಓದುತ್ತಿದ್ದ ಹರೀಶ್‌ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಕಲಿಕೆಯಲ್ಲಿ ಮಾತ್ರವಲ್ಲದೇ ಕಬಡ್ಡಿ ಆಟಗಾರನಾಗಿಯೂ ಗುರುತಿಸಿಕೊಂಡಿದ್ದ.

ಸ್ಟೇಟಸ್‌ ಅಪ್‌ಲೋಡ್‌
ಟೈಮ್‌ ಈಸ್‌ ಓವರ್‌, ಐ ಆ್ಯಮ್‌ ಕಮಿಂಗ್‌ ಗಾಡ್‌. ಜೀವನ ಅಂದ್ರೆ ಏನಂತ ಚೆನ್ನಾಗಿ ತಿಳ್ಕೊಂಡೆ ಎಂದು ಹರೀಶ್‌ ಶುಕ್ರವಾರ ತನ್ನ ವ್ಯಾಟ್ಸಪ್‌ ಸ್ಟೇಟಸ್‌ ಅಪ್‌ಲೊಡ್‌ ಮಾಡಿಕೊಂಡಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next