Advertisement

ಕಾರ್ಕಳ: ಪದವೀಧರ ಶಿಕ್ಷಕರನ್ನಾಗಿ ಪರಿಗಣಿಸುವಂತೆ ಮನವಿ

11:59 AM Jun 02, 2019 | Team Udayavani |

ಕಾರ್ಕಳ: ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಪಡೆದಿರುವ ಸೇವಾನಿರತ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ವೃಂದಕ್ಕೆ ಪದನಾಮಕರಿಸುವಂತೆ ಉಡುಪಿ ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ವೇದಿಕೆ ವತಿಯಿಂದ ಸರಕಾರಕ್ಕೆ ಕ್ಷೇತ್ರಾ ಶಿಕ್ಷಣಾಧಿಕಾರಿಗಳ ಮೂಲಕ ಮನವಿ ನೀಡಲಾಯಿತು.

Advertisement

ಜೂ. 1ರಂದು ಕಾರ್ಕಳ ಬಿಇಒ ಕಚೇರಿಯಲ್ಲಿ ಮನವಿ ನೀಡಿದ ವೇದಿಕೆ ಸದಸ್ಯರು, 1ರಿಂದ 7 ನೇ ತರಗತಿಗೆ ನೇಮಕಗೊಂಡ ನಾವು 2005 ರಿಂದ 8ನೇ ತರಗತಿಗೂ ತರಗತಿ ನಡೆಸುತ್ತಿದ್ದೇವೆ. ರಾಜ್ಯದಲ್ಲಿ 82 ಸಾವಿರಕ್ಕಿಂತ ಅಧಿಕ ಪದವಿ (B.A., B.Sc., MA., M.Sc, Bed, Med, Ph.d.) ಪಡೆದ ಅನುಭವಿ ಶಿಕ್ಷಕರು 6-8ನೇ ತರಗತಿಗಳನ್ನು ಕಳೆದ 14 ವರ್ಷಗಳಿಂದ ಬೋಧಿಸುತ್ತಿದ್ದರೂ ಅವರನ್ನು ಮುಂಭಡ್ತಿಗೆ ಪರಿಗಣಿಸದೇ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಹುದ್ದೆಗಳನ್ನು 2 ಬಾರಿ ನೇರ ನೇಮಕ ಮಾಡಿ, ಇದೀಗ ಮತ್ತೆ 3ನೇ ಬಾರಿ ನೇರ ನೇಮಕ ಮಾಡಲಾಗುತ್ತಿದೆ.

ಈ ಕುರಿತು ಇಲಾಖೆ ಮುಖ್ಯಸ್ಥರು ಮತ್ತು ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ 2018 ಫೆ. 5ರಂದು ಪ್ರೀಡಂ ಪಾರ್ಕ್‌ನಲ್ಲಿ 25,000 ಶಿಕ್ಷಕರು ಉಪವಾಸ ಸತ್ಯಾಗ್ರಹ ನಡೆಸಿದರೂ ಸರಕಾರ ಸ್ಪಂದಿಸಿಲ್ಲ ಎಂದು ವೇದಿಕೆ ಬೇಸರ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next