Advertisement

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

11:03 PM Apr 29, 2024 | Team Udayavani |

ಕಾರ್ಕಳ: ಬೆೇಳಂಜೆ ಸಂಜೀವ ಹೆಗ್ಡೆ ಅವರ ಸ್ಮರಣಾರ್ಥ ಹೆಬ್ರಿಯ ಬೆೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್‌ ಮೂಲಕ ಆರೋಗ್ಯ ಮೂಲಸೌಕರ್ಯ ಉತ್ತೇಜಿಸುವ ಉದ್ದೇಶದಿಂದ ಕಾರ್ಕಳದ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಾ| ಎಚ್‌. ಎಸ್‌. ಬಲ್ಲಾಳ್‌ ಮತ್ತು ಡಾ| ಎಚ್‌. ಸುದರ್ಶನ್‌ ಬಲ್ಲಾಳ್‌ ಅವರು ನೀಡಿದ ಅತ್ಯಾಧುನಿಕ ಡಯಾಲಿಸಿಸ್‌ ಯಂತ್ರದ ಹಸ್ತಾಂತರ ಕಾರ್ಯಕ್ರಮ ನಡೆಯಿತು.

Advertisement

ಬೆೇಳಂಜೆ ಸಂಜೀವ ಹೆಗಡೆ ಟ್ರಸ್ಟಿ ಹಾಗೂ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸೆಸ್‌ ಪ್ರೈವೇಟ್‌ ಲಿಮಿಟೆಡ್‌ ಮುಖ್ಯಸ್ಥ ಡಾ| ಎಚ್‌. ಸುದರ್ಶನ್‌ ಬಲ್ಲಾಳ್‌ ಡಯಾಲಿಸಿಸ್‌ ಯಂತ್ರ ಹಸ್ತಾಂತರಿಸಿ ಮಾತನಾಡಿ, ಪ್ರಪಂಚದಾದ್ಯಂತ ಸುಮಾರು 850 ಮಿಲಿಯನ್‌ ವ್ಯಕ್ತಿಗಳು ಮೂತ್ರಪಿಂಡ ಕಾಯಿಲೆ ಬಾಧಿತರಾಗಿರು ವುದರಿಂದ, ವರ್ಧಿತ ಜಾಗೃತಿ ಮತ್ತು ಸಂಬಂಧಿತ ಚಿಕಿತ್ಸಾ ತಂತ್ರಗಳ ಅಗತ್ಯವು ಅತ್ಯಗತ್ಯವಾಗಿದೆ ಎಂದರು.

ಮಾಹೆ ಮಣಿಪಾಲದ ಕುಲಪತಿ ಲೆ| ಜ| ಡಾ| ಎಂ. ಡಿ. ವೆಂಕಟೇಶ್‌ ಅವರು ಮೂತ್ರಪಿಂಡ ಕಾಯಿಲೆ ಮತ್ತು ಹೃದಯ ರಕ್ತನಾಳದ ಆರೋಗ್ಯದ ನಡುವಿನ ಸಂಬಂಧದಿಂದಾಗುವ ಅಪಾಯಕಾರಿ ಅಂಶಗಳ ಬಗ್ಗೆ ವಿವರಿಸಿದರು.

ಕಾರ್ಕಳದ ಡಾ|ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಭವಿಷ್ಯದ ಯೋಜನೆ‌ ರಕ್ತನಿಧಿ ಮತ್ತು ಸಿ ಟಿ ಸ್ಕ್ಯಾನ್‌ ಕುರಿತು ಅವರು ತಿಳಿಸಿದರು.

ಜಿ ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಸಂಸ್ಥಾಪಕ ಡಾ| ಜಿ ಶಂಕರ್‌ ಅವರು ಟ್ರಸ್ಟ್‌ ಕೈಗೊಂಡ ಶ್ಲಾಘನೀಯ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ| ದರ್ಶನ್‌ ರಂಗಸ್ವಾಮಿ ಸ್ವಾಗತಿಸಿದರು.

ಕಾರ್ಕಳದ ಡಾ|ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಕೀರ್ತಿನಾಥ ಬಲ್ಲಾಳ ವಂದಿಸಿದರು.

ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯವಿಜ್ಞಾನ) ಡಾ| ಶರತ್‌ ಕುಮಾರ್‌ ರಾವ್‌, ಕೆಎಂಸಿ ಡೀನ್‌ ಡಾ| ಪದ್ಮರಾಜ್‌ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ| ಆನಂದ್‌ ವೇಣುಗೋಪಾಲ್ ಮತ್ತು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next