Advertisement

ಮುಕ್ತಿ ಧಾಮದ ಸೊತ್ತನ್ನೂ ಬಿಡದ ಕಳ್ಳರು : ಮೃತ ದೇಹ ಸುಡುವ ಸಿಲಿಕಾನ್‌ ಬ್ಲಾಕ್‌ ಕಳ್ಳತನ

11:23 PM Jul 16, 2022 | Team Udayavani |

ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಹಿಂದೂ ರುದ್ರ ಭೂಮಿಯಲ್ಲಿ ಮೃತ ದೇಹ ಸುಡುವ ಸಿಲಿಕಾನ್‌ನ ಬ್ಲಾಕ್‌ ಅನ್ನು ಕಳ್ಳರು ಕದ್ದೊಯ್ದ ಘಟನೆ ಜು.16ರಂದು ನಡೆದಿದೆ.

Advertisement

ಕರಿಯಕಲ್ಲು ಸಾರ್ವಜನಿಕ ರುದ್ರಭೂಮಿಯಲ್ಲಿ ಮೃತ ದೇಹವನ್ನು ಸುಡಲು ನಾಲ್ಕು ಸಿಲಿಕಾನ್‌ ಜಾತಿಯ ಸಿಲಿಕಾನ್‌ ಬ್ಲಾಕ್‌ಗಳನ್ನು ಇರಿಸಲಾಗಿತ್ತು. ಇವುಗಳ ಪೈಕಿ ಒಂದು ಸಿಲಿಕಾನ್‌ ಬ್ಲಾಕ್‌ ಅನ್ನು ಕಳ್ಳರು ಹೊತ್ತೂಯ್ದಿದ್ದಾರೆ.

ಎ.16ರಂದು ಬೆಳಗ್ಗೆ ಶವ ಸುಡಲೆಂದು ಹಿಂದೂ ರುದ್ರ ಭೂಮಿಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳತನವಾದ ಸಿಲಿಕಾನ್‌ ಬ್ಲಾಕ್‌ ಒಂದಕ್ಕೆ 7 ಸಾವಿರ ರೂ. ಇದೆ. ಸಾರ್ವಜನಿಕ ರುದ್ರಭೂಮಿಯಲ್ಲಿ ಕಳ್ಳತನವಾದ ಬಗ್ಗೆ ಪುರಸಭೆಗೆ ಮಾಹಿತಿ ನೀಡಲಾಗಿದೆ.

ಪುರಸಭೆ ಮಾಜಿ ಸದಸ್ಯ ಪ್ರಕಾಶ್‌ ರಾವ್‌ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next