Advertisement

ಕಾರ್ಕಳ: CC ಕೆಮರಾ ಇಲ್ಲದೆ ಭದ್ರತೆಗೆ ಸವಾಲು: CC ಕೆಮರಾ ಕುರಿತ ನಿಯಮ ಇಲ್ಲಿ ಪಾಲನೆಯಾಗಿಲ್ಲ

11:13 PM Mar 16, 2021 | Team Udayavani |

ಕಾರ್ಕಳ: ನಗರದಲ್ಲಿ ಚಟುವಟಿಕೆಗಳ ಮೇಲೆ ಹದ್ದಿನ‌ ಕಣ್ಣಿಡಬೇಕಾದ ಸಿಸಿ ಕೆಮರಾಗಳು ಇಲ್ಲದೆ ಕಾನೂನು ಸುವ್ಯವಸ್ಥೆ ಸುಭದ್ರವಾಗಿಲ್ಲ . ಪುರಸಭೆ ವ್ಯಾಪ್ತಿಯಲ್ಲಿ 3ರಿಂದ 4 ಸಿಸಿ ಕೆಮರಾ, ಡಿವೈಎಸ್ಪಿ ವಿಭಾಗದಲ್ಲಿ ಒಟ್ಟು 8 ಸಿಸಿ ಕೆಮರಾಗಳಿವೆ. ಕಾರ್ಕಳ ಮುಖ್ಯ ಪೇಟೆಗೆಯ ಹೊರ ವಲಯದಲ್ಲಿ ಹಾದು ಹೋಗುವ ಬೈಪಾಸ್‌ ರಸ್ತೆ, ಇನ್ನಿತರ ಕಡೆಗಳಲ್ಲಿ ಕೆಮರಾ ಅಳವಡಿಸಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲೂ ಇಲ್ಲ. ಆಯಕಟ್ಟಿನ ಸ್ಥಳಗಳಲ್ಲೂ ಇಲ್ಲ.

Advertisement

ಬೈಪಾಸ್‌ ರಸ್ತೆಯ ಸರ್ವಜ್ಞ ವೃತ್ತ, ಜೋಡು ರಸ್ತೆಯ ರಾಘವೇಂದ್ರ ವೃತ್ತದ ಬಳಿ, ಅಂಬೇಡ್ಕರ್‌ ವೃತ್ತ (ಗಣಪತಿ ದೇವಸ್ಥಾನದ ಬಳಿ,) ಅನಂತಶಯನ, ಬಸ್‌ಸ್ಟಾಂಡ್‌, ಆನೆಕೆರೆ, ಬಾಹುಬಲಿ ಬೆಟ್ಟ, ಕೋಟಿಚೆನ್ನಯ ಥೀಮ್‌ ಪಾರ್ಕ್‌ ಮೊದಲಾದ ಪ್ರಮುಖ ಕೇಂದ್ರಗಳಲ್ಲಿ ಕಣ್ಗಾವಲಿನ ಅವಶ್ಯವಿದೆ.

ಕಡ್ಡಾಯ ನಿಯಮ ಪಾಲನೆಯಾಗಿಲ್ಲ
100ರಿಂದ 500 ಜನ ಸೇರುವ ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿ ಅಳವಡಿಸಬೇಕು ಎನ್ನುವ ಕಾನೂನನ್ನು
ಈ ಹಿಂದೆ ರಾಜ್ಯ ಸರಕಾರ ಜಾರಿಗೆ ತಂದಿತ್ತು. ವಾಣಿಜ್ಯ ಸಂಸ್ಥೆಗಳು, ಅಂಗಡಿಗಳು, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳು, ಧಾರ್ಮಿಕ ಸಂಕೀರ್ಣಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರ ತಾಣಗಳಲ್ಲಿ ಸಿಸಿಟಿವಿ ಅಳವಡಿಸಬೇಕೆಂಬ ನಿಯಮವಿದೆ.

ಸಿಸಿಟಿವಿ ಅಳವಡಿಕೆಯು ಕಳ್ಳತನ ಸೇರಿದಂತೆ ಅಪರಾಧ ಪತ್ತೆ ಹಚ್ಚಲು ಮತ್ತು ವ್ಯಕ್ತಿಗಳ ದಾಖಲೆಗಳನ್ನು ಪಡೆಯಲು ಕಣ್ಗಾವಲು ವ್ಯವಸ್ಥೆ ಅಗತ್ಯವಿದೆ.

ಬೇಡಿಕೆ ಪತ್ರ ಬಂದಿದೆ
ಸಿಸಿ ಕೆಮರಾಕ್ಕೆ ಪೊಲೀಸ್‌ ಇಲಾಖೆಯಿಂದ ಬೇಡಿಕೆ ಪತ್ರ ಬಂದಿದೆ. ಪುರಸಭೆ ವತಿಯಿಂದ ಪೇಟೆಯಲ್ಲಿ ಸಿಸಿ ಕೆಮರಾ ಅಳವಡಿಸಲು
ಗಮನ ಹರಿಸಲಾಗುವುದು. ಈ ಬಗ್ಗೆ ಪುರಸಭೆಯಲ್ಲಿ ಚರ್ಚೆ ನಡೆದಿವೆ.
-ರೇಖಾ ಜೆ. ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

Advertisement

32 ಸಿಸಿ ಕೆಮರಾ ಅಗತ್ಯ
ಇಲಾಖೆ ವತಿಯಿಂದ ಹೆಚ್ಚಿನ ಸಿಸಿ ಕೆಮರಾಕ್ಕೆ ಬೇಡಿಕೆ ಇರಿಸಲಾಗಿದೆ. ಸಾರ್ವಜನಿಕರ ಸಹಕಾರ ಕೂಡ ಕೇಳಿದ್ದೇವೆ. ಪುರಸಭೆಗೂ ಮನವಿ ಮಾಡಿದ್ದೇವೆ.ಸುಮಾರು 32 ಸಿಸಿ ಕೆಮರಾಗಳ ಅಗತ್ಯವಿದೆ.
-ಭರತ್‌ ರೆಡ್ಡಿ , ಡಿವೈಎಸ್ಪಿ, ಕಾರ್ಕಳ

ಪೊಲೀಸರಿಗೂ ಕಿರಿಕಿರಿ!
ರಸ್ತೆ ಸುರಕ್ಷತೆ, ಸಂಚಾರ ದಟ್ಟಣೆ ನಿಯಂತ್ರಣ, ಅಪರಾಧ ಪ್ರಕರಣಗಳ ಪತ್ತೆಗೆ ಸಹಕಾರಿಯಾಗಬೇಕಿದ್ದ ಸಿಸಿ ಕೆಮರಾ ಇಲ್ಲದಿರುವುದು ಪೊಲೀಸರನ್ನು ಚಿಂತೆಗೀಡು ಮಾಡಿದೆ. ಅಪರಾಧ ಪ್ರಕರಣಗಳು ಒಂದೆಡೆ ಹೆಚ್ಚುತ್ತಿದೆ. ಅಂತಾರಾಜ್ಯ ಕಳ್ಳತನ, ಗೋ ಕಳ್ಳತನ, ಮನೆಗಳ್ಳತನ, ಸರಗಳ್ಳತನ ವಾಹನ ಕಳ್ಳತನ ಇದೆಲ್ಲ ಪ್ರಕರಣಗಳನ್ನು ಅತೀ ಶೀಘ್ರ ಭೇದಿಸಲು ಪೊಲೀಸರಿಗೆ ಹೆಚ್ಚು ಸಹಾಯವಾಗುವುದು ಸಿಸಿ ಕೆಮರಾಗಳು. ಇಷ್ಟು ದೊಡ್ಡ ನಗರದಲ್ಲಿ ಬೆರಳೆಣಿಕೆಯ ಸಿಸಿ ಕೆಮರಾಗಳಿರುವುದು ಪೊಲೀಸರ ತನಿಖೆಗೂ ಹಿನ್ನಡೆಯಾಗಿದೆ. ಅಪರಾಧ ನಡೆದಾಗ ಖಾಸಗಿ ಕೆಮರಾ ಮಾಲಕರ ಮೊರೆ ಹೋಗುವುದು ಪೊಲೀಸರಿಗೂ ಮುಜುಗರ ತರುತ್ತಿದೆ. ಜತೆಗೆ ಕಾನೂನು ಉಲ್ಲಂಘನೆ, ಅಪರಾಧ ಕೃತ್ಯಗಳ ಬಗ್ಗೆ ತನಿಖೆ ಸಿಸಿ ಕೆಮರಾ ಇಲ್ಲದ್ದರಿಂದ ಸವಾಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next