Advertisement

ಕಾರ್ಕಳ: ಕೆರೆಗೆ ಸ್ನಾನ ಮಾಡಲು ಹೋದ ಇಬ್ಬರು ನೀರುಪಾಲು

09:48 AM Mar 28, 2020 | sudhir |

ಕಾರ್ಕಳ: ಕಾರ್ಕಳ ನಗರದಲ್ಲಿರುವ ರಾಮಸಮುದ್ರ ಕೆರೆಗೆ ಸ್ನಾನಕ್ಕೆಂದು ನೀರಿಗಿಳಿದ ಇಬ್ಬರು ಆಕಸ್ಮಿಕವಾಗಿ ನೀರುಪಾಲಾದ ಘಟನೆ ಮಾ. 27ರಂದು ಮಧ್ಯಾಹ್ನ ನಡೆದಿದೆ. ಭದ್ರಾವತಿ ಮೂಲದ ಕೂಲಿಕಾರ್ಮಿಕನ ಪತ್ನಿ ಕವಿತಾ (24) ಹಾಗೂ ಕಾರ್ಕಳ ಕಾಬೆಟ್ಟು ಶ್ರೀನಿವಾಸ ಅವರ ಮಗಳು ದೀಕ್ಷಿತಾ (12) ನೀರುಪಾಲಾದ ದುರ್ದೈವಿಗಳು.

Advertisement

ಕೆಲ ದಿನಗಳ ಹಿಂದೆ ಮಂಗಳಪಾದೆಯ ಚಿಕ್ಕಪ್ಪನ ಮನೆಗೆ ತೆರಳಿದ್ದ ದೀಕ್ಷಿತಾ ತನ್ನ ಚಿಕ್ಕಪ್ಪನ ಮಗ ಶರತ್‌ (10) ಹಾಗೂ ಕವಿತಾರೊಂದಿಗೆ ಸ್ನಾನಕ್ಕೆಂದು ಮಾ. 27ರ ಮಧ್ಯಾಹ್ನ ರಾಮಸಮದ್ರಕ್ಕೆ ತೆರಳಿದ್ದರು. ಕವಿತಾ ಹಾಗೂ ದೀಕ್ಷಿತಾ ನೀರಿಗಿಳಿದು ಸ್ನಾನಕ್ಕೆ ಮುಂದಾದರು. ಈ ವೇಳೆ ಇಬ್ಬರೂ ನೀರಲ್ಲಿ ಮುಳುಗುತ್ತಿರುವುದನ್ನು ಕಂಡ ಶರತ್‌ ಓಡಿ ಬಂದು ಮನೆಗೆ ಸುದ್ದಿ ತಿಳಿಸಿದನು. ತಕ್ಷಣವೇ ಸ್ಥಳೀಯ ಈಜುಪಟುಗಳು ನೀರಿಗಿಳಿದು ಶೋಧ ಕಾರ್ಯ ನಡೆಸಿದರು.

ಅಗ್ನಿಶಾಮಕ ದಳ ಸಿಬ್ಬಂದಿಯೂ ನೆರವಾದರು. ಕೆಲ ಗಂಟೆಗಳ ಬಳಿಕ ಇಬ್ಬರ ಮೃತದೇಹವನ್ನು ಪತ್ತೆ ಹಚ್ಚಿ ನೀರಿನಿಂದ ಮೇಲಕ್ಕೆತ್ತಲಾಯಿತು.

ಸ್ಥಳಕ್ಕೆ ತಹಶೀಲ್ದಾರ್‌ ಪುರಂದರ ಹೆಗ್ಡೆ, ನಗರ ಠಾಣಾ ಎಸ್‌ಐ ಮಧು ಬಿ.ಇ., ಪುರಸಭಾ ಸದಸ್ಯ ವಿನ್ನಿಬೋಲ್ಡ್‌, ಪುರಸಭಾ ಪರಿಸರ ಅಭಿಯಂತರ ಮದನ್‌, ಗ್ರಾಮ ಕರಣಿಕ ಶಿವಪ್ರಸಾದ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next