Advertisement

ಗೋವಾದಲ್ಲಿ ಕರವೇ ಕನ್ನಡಿಗರ ಧ್ವನಿಯಾಗಿ ನಿಲ್ಲಲಿದೆ : ಮಂಜುನಾಥ ನಾಟೀಕಾರ್

04:50 PM Mar 02, 2023 | Team Udayavani |

ಪಣಜಿ: ಗೋವಾದಲ್ಲಿ ಇದುವರೆಗೂ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಗೋವಾದಲ್ಲಿರುವ ಕನ್ನಡಿಗರ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಕುಮಾರ್ ಶೆಟ್ಟಿ ಬಣ ಕೆಲಸ ಮಾಡಲಿದೆ. ಕನ್ನಡಿಗರಿಗೆ ತೊಂದರೆಯಾದಾಗ ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಕನ್ನಡಿಗರ ಪರವಾಗಿ ನಿಲ್ಲಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕಾರ್ ಹೇಳಿದರು.

Advertisement

ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯಲ್ಲಿ ವಾಸ್ಕೊ ಮುರಗಾಂವ ಜೆಟ್ಟಿಯಲ್ಲಿರುವ ಶ್ರೀ ಮೇಘರಾಜ ದೇವಸ್ಥಾನದಲ್ಲಿ ಪಾರ್ವತಿ ಛಲವಾದಿ ರವರ ಮಹಿಳಾ ಸಂಘಟನೆಯ 50 ಕ್ಕೂ ಹೆಚ್ಚು ಜನ ಸದಸ್ಯರು ಕರ್ನಾಟಕ ರಕ್ಷಣಾ ವೇದಿಕೆಯನ್ನು ಸೇರ್ಪಡೆಯಾದರು ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಾಟೀಕಾರ್ ಅಗತ್ಯ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಪಾರ್ವತಿ ಛಲವಾದಿ ರವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಮುರಗಾಂವ ಕ್ಷೇತ್ರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ಮುರಗಾಂವ ಕ್ಷೇತ್ರದ ಹಿರೀಯ ಕನ್ನಡಿಗರಾದ ನಮ್ಮ ಸಂಘಟನೆಯ ಮಾರ್ಗದರ್ಶಕರಾದ ಸಿದ್ಧಪ್ಪ ಹಡಪದ, ಹನುಮಂತ ಗೋನಾಳ, ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶಿವಮ್ಮ ಹರಿಜನ, ಭಾಗ್ಯಶ್ರೀ, ರಾಜ್ಯ ಉಪಾಧ್ಯಕ್ಷರಾದ ಮಹಾಂತೇಶ ಕಾರಿಗೇರಿ, ರಾಜ್ಯ ಕಾರ್ಯದರ್ಶಿ ಶಿವಾನಂದ ಮಸಿಬಿನಾಳ, ಯುವಮೋರ್ಚಾ ಅಧ್ಯಕ್ಷ ಯಶವಂತ್ ಕಿಂಗ್, ಮಾಧ್ಯಮ ಸಂಚಾಲಕರಾದ ರಮೇಶ ಮಾದರ್ ಮತ್ತು ಜೆಟ್ಟಿ ಊರಿನ ಹಿರೀಯ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next