Advertisement

ಆತ್ಮ ರಕ್ಷಣೆಯ ಕಲೆಯಾಗಿ ಕರಾಟೆ: ನಿತ್ಯಾನಂದ

09:15 PM Jun 21, 2019 | Sriram |

ಕಾರ್ಕಳ: ಜೇಸೀಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರಾಟೆ ತರಗತಿಯನ್ನು ಕರ್ನಾಟಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಅವರು, ನಿರಂತರ ಪ್ರಯತ್ನ, ಕಠಿನ ಪರಿಶ್ರಮದಿಂದ ಉನ್ನತ ಹಂತಕ್ಕೇರಲು ಸಾಧ್ಯ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಕರಾಟೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಉಪಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌ ಮಾತನಾಡಿ, ಕರಾಟೆ ವಿದ್ಯಾರ್ಥಿಗಳಲ್ಲಿ ಧೈರ್ಯ, ಮನೋಬಲ ವೃದ್ಧಿಸಲಿದೆ. ವಿದ್ಯಾರ್ಥಿಗಳು ಕರಾಟೆ ತರಗತಿ ಸದುಪ ಯೋಗಪಡಿಸಿಕೊಳ್ಳಬೇಕೆಂದರು. ಸಂಸ್ಥೆಯ ಅಧ್ಯಕ್ಷ ಚಿತ್ತರಂಜನ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರಾಟೆ ತರಬೇತುದಾರ ಸತೀಶ್‌ ಬೆಳ್ಮಣ್ಣು, ಶಾಲಾ ಆಡಳಿತಾಧಿಕಾರಿ ಪೂನಂ ಕಾಮತ್‌ ಉಪಸ್ಥಿತರಿದ್ದರು. ಶಿಕ್ಷಕಿ ನವರತ್ನಾ ಸ್ವಾಗತಿಸಿ, ಪ್ರೀತಿ ಬಿ.ಕೆ. ನಿರೂಪಿಸಿದರು, ಪ್ರಮೋದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next