Advertisement

ಬಾಗಿಲು ತೆರೆದ ಕಾರಣಗಿರಿ ದೇವಸ್ಥಾನ

09:14 AM Jun 15, 2020 | Suhan S |

ಹೊಸನಗರ: ತಾಲೂಕಿನ ಪ್ರಸಿದ್ದ ಕಾರಣಿಕ ಸ್ಥಳವಾದ ಶ್ರೀ ಕ್ಷೇತ್ರ ಕಾರಣಗಿರಿ ಸಿದ್ಧಿವಿನಾಯಕ ದೇವಸ್ಥಾನ ಭಾನುವಾರದಿಂದ ಬಾಗಿಲು ತೆರೆದಿದೆ.

Advertisement

ಕೋವಿಡ್ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ದೇವಸ್ಥಾನ ಭಾನುವಾರ ಅಧಿಕೃತವಾಗಿ ತೆರೆದಿದ್ದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ ದೇವಸ್ಥಾನ ಸುತ್ತಮುತ್ತ ಮುನ್ನಚ್ಚರಿಕಾ ಕ್ರಮವಾಗಿ ಸ್ಯಾನಿಟೈಸ್‌ ಮಾಡಲಾಯಿತು. ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸಿಂಗ್‌ ಮಾಡಿಸಿಕೊಳ್ಳುವುದು. ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಭಕ್ತರು ಹಣ್ಣು- ಕಾಯಿ ತರುವಂತಿಲ್ಲ. ದೇವಸ್ಥಾನದ ಯಾವುದೇ ವಸ್ತು ಮುಟ್ಟುವಂತಿಲ್ಲ. ಸದ್ಯ ದೇವರ ಪ್ರಸಾದ ದೊರೆಯುವುದಿಲ್ಲ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಶಕ್ತಿ ಪ್ರಭಾಕರ್‌ ರಾವ್‌ ತಿಳಿಸಿದ್ದಾರೆ. ಸದಸ್ಯರಾದ ಎನ್‌.ಆರ್‌. ಶಮಂತ್‌ ಬೆಟ್ಟೆ, ಎಚ್‌.ಟಿ. ಸುರೇಂದ್ರ ಹೆಗಡೆ, ಕಾರYಡಿ ವಿಶ್ವನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next