Advertisement

Kapu ಅಕ್ರಮ ಮರಳು ಸಾಗಾಟ ಪತ್ತೆ; ಮೂವರು ವಶಕ್ಕೆ

10:52 PM Sep 15, 2023 | Team Udayavani |

ಕಾಪು: ಮಣಿಪುರ ಚರ್ಚ್‌ ಬಳಿ ಮರಳು ಅಕ್ರಮ ಸಾಗಾಟ ಮಾಡುತ್ತಿದ್ದ ಟೆಂಪೋವನ್ನು ತಡೆ ಹಿಡಿದ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.

Advertisement

ಕಾಪು ಎಸ್ ಐ ಅಬ್ದುಲ್‌ ಖಾದರ್‌ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಟೆಂಪೋ ಚಾಲಕ ನಝೀರ್‌, ಮಿಥುನ್‌ ಮತ್ತು ಜೀವನ್‌ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 407 ಟೆಂಪೋ ಸಹಿತ ಫುಲ್ ಲೋಡ್‌ ಮರಳನ್ನು ಸ್ವಾಧೀನಪಡಿಸಿಕೊಂಡಿರುವ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next