Advertisement

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

02:48 PM May 16, 2021 | Team Udayavani |

ಕಾಪು : ಕಾಪು‌ ಲೈಟ್ ಹೌಸ್ ಗಿಂತ 15 ಕಿ.ಮೀ ದೂರದ ಕಾಪು ಪಾರ್ ಬಂಡೆಗೆ ಸಿಲುಕಿ ಪ್ರಾಣ ರಕ್ಷಣೆಗೆ ಒದ್ದಾಡುತ್ತಿರುವ 9 ಮಂದಿಯ ರಕ್ಷಣೆಗೆ ಇನ್ನೂ ರಕ್ಷಣಾ ಕಾರ್ಯಾಚರಣೆ ಪ್ರಾರಂಭಗೊಳ್ಳದೇ ಇರುವುದರಿಂದ ಆತಂಕ ಎದುರಾಗಿದೆ.

Advertisement

ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯದ ಪರಿಣಾಮ ಸಮುದ್ರ ಮಧ್ಯದಲ್ಲೇ 9 ಮಂದಿ ಜೀವ ಭಯದಿಂದ ಒದ್ದಾಡುವಂತಾಗಿದೆ.

ನವಮಂಗಳೂರು ಬಂದರಿಗೆ ಪ್ರವೇಶಿಸಬೇಕಿದ್ದ ಕೋರಂಗಲ್ ಬೋಟ್ ಚಂಡ ಮಾರುತದ ಪ್ರತಾಪಕ್ಕೆ ಸಿಲುಕಿ ಕಾಪು‌ಲೈಟ್ ಹೌಸ್ ಬಳಿಯ ಕಾಪು ಪಾರ್ ಬಂಡೆಗೆ ಸಿಲುಕಿ ಅಪಘಾತಕ್ಕೀಡಾಗಿತ್ತು.

ಬೋಟ್ ಅಪಘಾತಕ್ಕೀಡಾದ ವಿಚಾರ ರವಿವಾರ ಬೆಳಗ್ಗೆ 8.30 ಕ್ಕೆ ಕರಾವಳಿ ಕಾವಲು ಪಡೆ ಪೊಲೀಸರಿಗೆ ವರದಿಯಾಗಿದ್ದು, ಬಳಿಕ ರಕ್ಷಣಾ ಕಾರ್ಯಾಚರಣೆ ಗೆ ಸಿದ್ಧತೆಗಳು ನಡೆದಿದ್ದವು.

ಇದನ್ನೂ ಓದಿ : ಕಾಪು‌ ಲೈಟ್ ಹೌಸ್ ನಿಂದ 15 ಕಿ. ಮೀ. ದೂರದಲ್ಲಿ‌ ಸಂಕಷ್ಟಕ್ಕೆ ಸಿಲುಕಿರುವ ಬೋಟ್ ಸಿಬ್ಬಂದಿಗಳು

Advertisement

ರಕ್ಷಣಾ ಕಾರ್ಯಾಚರಣೆ ನಡೆಸುವ ಬಗ್ಗೆ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ನಡೆಸಲಿದೆ ಎಂದು ಕೀ ರೋಜ್ ಕಂಪೆನಿಯ ಪ್ರಬಂಧಕ  ವೇಲು ತಿಳಿಸಿದ್ದರು. ಆದರೆ ಮಧ್ಯಾಹ್ನದ ವರೆಗೂ ರಕ್ಷಣಾ ಕಾರ್ಯಾಚರಣೆ ನಡೆಯದೇ ಇದ್ದುದರಿಂದ ಬೋಟ್ ನಲ್ಲಿ ಇರುವವರ ಆತಂಕ ಮತ್ತಷ್ಡು ಹೆಚ್ಚಾಗಿದೆ‌.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ ಎಸ್ಪಿ ವಿಷ್ಣುವರ್ಧನ್, ಎಡಿಸಿ ಸದಾಶಿವ ಪ್ರಭು, ಅಡಿಷನಲ್ ಎಸ್ಪಿ ಕುಮಾರಚಂದ್ರ, ಸಿಐ ಪ್ರಕಾಶ್, ಕರಾವಳಿ ಕಾವಲು ಪಡೆಯ ಅಧಿಕಾರಿಗಳಾದ ನಾಗರಾಜ್, ಸುಜಾತ, ಕಾಪು ಎಸ್ಸೈ ರಾಘವೇಂದ್ರ ಮೊದಲಾದವರು ಭೇಟಿ‌ ನೀಡಿದರಾದರೂ ಮಧ್ಯಾಹ್ನದವರೆಗೂ ಯಾವುದೇ ರೀತಿಯ ರಕ್ಷಣಾ  ಕಾರ್ಯಾಚರಣೆ ನಡೆಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.‌

Advertisement

Udayavani is now on Telegram. Click here to join our channel and stay updated with the latest news.

Next