Advertisement

ಪಾಕ್‌ ಗೆಲುವಿಗೆ ‘ಕಪ್ತಾನ್‌’ಸಲಹೆ

01:47 AM Jun 17, 2019 | Sriram |

ಇಸ್ಲಾಮಾಬಾದ್‌ : ಪಾಕಿಸ್ಥಾನ ತಂಡವನ್ನು ಹುರಿದುಂಬಿಸಲು ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌ ಅವರೇ ಸ್ವತಃ ರಂಗಕ್ಕಿಳಿಯಬೇಕಾಯಿತು. ಸರಣಿ ಟ್ವೀಟ್‌ಗಳ ಮೂಲಕ ಇಮ್ರಾನ್‌ ಖಾನ್‌ ಭಾರತದ ವಿರುದ್ಧ ಸೋಲುವ ಭಯದಿಂದ ಮೊದಲು ಹೊರಬನ್ನಿ ಎಂದು ಕಿವಿಮಾತು ಹೇಳಿದ್ದಾರೆ.

Advertisement

ಸೋಲಿನ ಭಯ ನಮ್ಮಲ್ಲಿ ನಕರಾತ್ಮಕ ಭಾವನೆಯನ್ನು ಬೆಳೆಸುತ್ತದೆ ಮತ್ತು ನಾವು ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಗಮನ ನೀಡುತ್ತೇವೆ. ಮನಸ್ಸಿನಿಂದ ಸೋಲುವ ಭಯವನ್ನು ಮೊದಲು ಕಿತ್ತು ಹಾಕಿ ಎಂದು ಪಂದ್ಯಕ್ಕೂ ಮುನ್ನ ಇಮ್ರಾನ್‌ ಹೇಳಿದರು. ಟಾಸ್‌ ಗೆದ್ದರೆ ಮೊದಲು ಬ್ಯಾಟಿಂಗನ್ನೇ ಆಯ್ದುಕೊಳ್ಳಿ ಎಂದೂ ಇಮ್ರಾನ್‌ ಸಲಹೆ ಮಾಡಿದ್ದರು. ಆದರೆ ಸಫ‌ರ್ರಾಜ್‌ ಈ ಸಲಹೆಗೆ ಬೆಲೆ ನೀಡಿಲ್ಲ. ಪಾಕಿಸ್ಥಾನದ ಏಕೈಕ ವಿಶ್ವಕಪ್‌ ಗೆಲುವಿನ ರೂವಾರಿಯಾಗಿರುವ ಇಮ್ರಾನ್‌ ಖಾನ್‌ ಅವರನ್ನು ಜನರು ಈಗಲೂ ಪ್ರೀತಿಯಿಂದ ‘ಕಪ್ತಾನ್‌’ ಎಂದೇ ಕರೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next