Advertisement

ಭಾರಿ ಮಳೆಯಿಂದ ಕಪಿಲತೀರ್ಥಕ್ಕೆ ಜೀವ ಕಳೆ

11:09 AM Sep 28, 2020 | sudhir |

ಹನುಮಸಾಗರ: ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ಸಮೀಪದ ಕಬ್ಬರಗಿ ಗ್ರಾಮದ ಕಪಿಲತೀರ್ಥವು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

Advertisement

ಕಲ್ಯಾಣ-ಕರ್ನಾಟಕದ ಜೋಗ ಜಲಪಾತಮಿನಿ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಕಪಿಲತೀರ್ಥ ಈ ವರ್ಷವೂ ಮೈದುಂಬಿದೆ. ಸತತ ಬರಗಾಲದಿಂದ ಮಳೆಯನ್ನೆ ಕಾಣದೇ ಕುಡಿಯುವ ನೀರಿಗೆ ಪರಿತಪಿಸುತ್ತಿರುವ ಈ ಭಾಗದಲ್ಲಿ ಕಪೀಲ ತೀರ್ಥ ಎರಡನೇ ವರ್ಷವೂ ಧುಮುಕುತ್ತಿದ್ದು, ಜಲಪಾತಕ್ಕೆ ಜೀವ ಕಳೆ ಬಂದಿದೆ.ಇಲ್ಲಿ ನೀರು ಬಂದರೆ ಸುತ್ತಮುತ್ತಲಿನ ಕೊಪ್ಪಳ, ಬಾಗಲಕೋಟ, ಗದಗ ಜಿಲ್ಲೆಯ ಪ್ರವಾಸಿಗರು ಆಗಮಿಸುತ್ತಾರೆ. ಹನುಮಸಾಗರ ಸಮೀಪವಿರುವ ಈ ಕಬ್ಬರಗಿ ಕಪಲೆಪ್ಪನ ಜಲಪಾತ ಗುಡ್ಡಬೆಟ್ಟಗಳ ಮಧ್ಯೆ ಇದೆ. ಹಚ್ಚು ಹಸಿರಿನ ನಡುವೆ ಧುಮುಕುವ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಬಾರಿ ಸ್ವಲ್ಪ ತಡವಾಗಿ ಜಲಪಾತಕ್ಕೆ ಜೀವಕಳೆ ಬಂದಿದೆ.

ನೀರಿನ ಮೂಲ: ಕಪಿಲತೀರ್ಥ ಗುಡ್ಡವು ಐತಿಹಾಸಿಕ ಸ್ಥಳಗಳಾದ ಐಹೊಳೆ, ಪಟ್ಟದಕಲ್ಲು, ಬಾದಾಮಿಯಿಂದ ಬೆಳಗಾವಿಯವರೆಗೂ ಇದೆ. ಈ ಗುಡ್ಡಗಳ ಮೇಲೆ ವೆಂಕಟಾಪೂರ, ಗಾಣದಾಳ ಎಂಬ ಗ್ರಾಮಗಳು ಹಾಗೂ ನಡುವೆ ಬರುವ ಸಣ್ಣ ಕೆರೆಗಳು ಇವೆ. ಮಳೆಗಾಲದಲ್ಲಿ ಗುಡ್ಡದ ಮೇಲಿಂದ ಹರಿದು ಬರುವ ನೀರು ಕಪಿಲ ತೀರ್ಥದ ಬಳಿ ಸುಮಾರು 15-20 ಅಡಿ ಎತ್ತರದಿಂದ ಧರೆಗೆ ಧುಮುಕುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next