Advertisement

ಚುನಾವಣೆ ಗೆಲ್ಲುವುದು ಕಷ್ಟ, ಮುಂದಿನ ಐದು ವರ್ಷ…; ಕಾಂಗ್ರೆಸ್ ಗೆ ಸಲಹೆ ನೀಡಿದ ಕಪಿಲ್ ಸಿಬಲ್

05:49 PM May 14, 2023 | Team Udayavani |

ಹೊಸದಿಲ್ಲಿ: ಮುಂದಿನ ಐದು ವರ್ಷಗಳಲ್ಲಿ ಜನರ ಹೃದಯ ಗೆಲ್ಲಿ. ಪ್ರಾಮಾಣಿಕ, ತಾರತಮ್ಯ ರಹಿತ ಆಡಳಿತ ನಡೆಸಿ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ಹೇಳದ್ದಾರೆ.

Advertisement

ಮಾಜಿ ಕಾಂಗ್ರೆಸ್ ಲೀಡರ್ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದು, “ಚುನಾವಣೆ ಗೆಲ್ಲುವುದು ಕಷ್ಟ, ಜನರ ಮನ ಗೆಲ್ಲುವುದು ಕಷ್ಟ. ಮುಂದಿನ ಐದು ವರ್ಷಗಳ ಕಾಲ, ಮುಕ್ತ, ಪ್ರಾಮಾಣಿಕ ಮತ್ತು ತಾರತಮ್ಯವಿಲ್ಲದೆ ಜನರ ಹೃದಯವನ್ನು ಗೆಲ್ಲಿರಿ. ಇದ್ಯಾವುದನ್ನೂ ಮಾಡದೇ ಬಿಜೆಪಿ ಸೋತಿದೆ” ಎಂದಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಗೆಲುವು ಸಾಧಿಸಿದ್ದು, 136 ಸ್ಥಾನಗಳನ್ನು ಗೆದ್ದುಕೊಂಡಿದೆ.

ಈ ಹಿಂದೆ ಚುನಾವಣಾ ಫಲಿತಾಂಶಕ್ಕೆ ಪ್ರತಿಕ್ರಿಯಿಸಿದ ಸಿಬಲ್, “ಪ್ರಧಾನಿ ಸೋತರು, ಕರ್ನಾಟಕದ ಜನರು ಗೆದ್ದಿದ್ದಾರೆ. 40%, ಕೇರಳ ಸ್ಟೋರಿ, ವಿಭಜನೆ ರಾಜಕೀಯ, ದುರಹಂಕಾರ, ಸುಳ್ಳಿಗೆ ಇಲ್ಲ ಎಂದಿದ್ದಾರೆ. ಕಾಂಗ್ರೆಸ್ ಗೆಲುವಿಗೆ ಅರ್ಹವಾಗಿದೆ” ಎಂದಿದ್ದಾರೆ.

Advertisement

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಕಪಿಲ್ ಸಿಬಲ್ ಅವರು ಕಳೆದ ವರ್ಷದ ಮೇ ತಿಂಗಳಲ್ಲಿ ಪಕ್ಷ ತೊರೆದಿದ್ದರು. ಬಳಿಕ ಸಮಾಜವಾದಿ ಪಕ್ಷದ ನೆರವಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next