Advertisement

ಕಪಿಲ್‌ ಬದಲಿ ಆಯ್ಕೆ ರಹಾನೆ

11:09 PM Jun 13, 2019 | Sriram |

ಹೊಸದಿಲ್ಲಿ: ಗಾಯಾಳು ಬ್ಯಾಟ್ಸ್‌ ಮನ್‌ ಶಿಖರ್‌ ಧವನ್‌ ಸ್ಥಾನಕ್ಕೆ ಅಜಿಂಕ್ಯ ರಹಾನೆ ಆಯ್ಕೆ ಸೂಕ್ತವಾಗುತ್ತಿತ್ತು ಎಂಬುದಾಗಿ ಭಾರತದ 1983ರ ವಿಶ್ವಕಪ್‌ ಹೀರೋ ಕಪಿಲ್‌ದೇವ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಅಜಿಂಕ್ಯ ರಹಾನೆ ಹೆಸರನ್ನು ಪರಿಗಣಿಸಿದ್ದೇ ಆದಲ್ಲಿ ಅವರೇ ಮೊದಲ ಆಯ್ಕೆ ಆಗುತ್ತಿದ್ದರು. ಪಂತ್‌, ರಾಯುಡು ಅವರನ್ನು ಮೀರಿಸಿದ ಆಯ್ಕೆ ಇದಾಗುತ್ತಿತ್ತು. ಅವರಿಗೆ ವಿಶ್ವಕಪ್‌ನಂಥ ದೊಡ್ಡ ಕೂಟಗಳಲ್ಲಿ ಆಡಿದ ಉತ್ತಮ ಅನುಭವವಿದೆ. ಇನ್ನಿಂಗ್ಸ್‌ ಆರಂಭಿಸುವ ಜತೆಗೆ ಮಧ್ಯಮ ಕ್ರಮಾಂಕದಲ್ಲೂ ಆಡುವ ಸಾಮರ್ಥ್ಯ ರಹಾನೆ ಅವರಲ್ಲಿದೆ’ ಎಂಬುದಾಗಿ ಕಪಿಲ್‌ ಹೇಳಿದರು.

ಅಜಿಂಕ್ಯ ರಹಾನೆ 2015ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2018ರ ಫೆಬ್ರವರಿ ಬಳಿಕ ಏಕದಿನ ಪಂದ್ಯವನ್ನು ಆಡಿಲ್ಲ. ಏಕದಿನದಲ್ಲಿ 35.26ರ ಸ್ಟ್ರೈಕ್‌ರೇಟ್‌ನಲ್ಲಿ 2,962 ರನ್‌ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next