Advertisement

ಮಿಶ್ರಾ ಸತ್ಯಾಗ್ರಹ ಆರಂಭ: ಆಪ್‌ ನಾಯಕರ ವಿದೇಶ ಭೇಟಿ ವಿವರಕ್ಕೆ ಆಗ್ರಹ

12:12 PM May 10, 2017 | udayavani editorial |

ಹೊಸದಿಲ್ಲಿ : ಐವರು ಆಪ್‌ ನಾಯಕರ ವಿದೇಶ ಭೇಟಿಗೆ ಹಣ ಬಂದದ್ದು ಎಲ್ಲಿಂದ ? ಎಂಬುದನ್ನು ಬಹಿರಂಗ ಪಡಿಸುವಂತೆ ಆಗ್ರಹಿಸಿ ಬಂಡುಕೋರ ಆಪ್‌ ಶಾಸಕ ಕಪಿಲ್‌ ಮಿಶ್ರಾ ಅವರು ಇಂದಿನಿಂದ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. 

Advertisement

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ತಾನು ಬರೆದಿರುವ ಬಹಿರಂಗ ಪತ್ರವನ್ನು ಓದಿದ ಮಿಶ್ರಾ, “ನಾನು ಸತ್ಯಾಗ್ರಹ ನಡೆಸುತ್ತಿದ್ದೇನೆ; ನಿಮ್ಮ ಮನೆಯ ಮುಂದೆ ನಾನು ಕುಳಿತಿಲ್ಲ; ಒಂದು ಮೂಲೆಯಲ್ಲಿ ಕುಳಿತಿದ್ದೇನೆ; ಉಪವಾಸ ಸತ್ಯಾಗ್ರಹದಿಂದ ನಾನು ಸತ್ತರೂ ನೀವದನ್ನು ಕೇರ್‌ ಮಾಡಲ್ಲ ಅಂತ ನನಗೆ ಗೊತ್ತಿದೆ; ಆದರೆ ನಾನು ಎತ್ತಿರುವ ಪ್ರಶ್ನೆಗಳು ಇಡಿಯ ದೇಶಕ್ಕೇ ಮುಖ್ಯವಾಗಿವೆ; ಇದು ಪ್ರತಿಭಟನೆ ಅಲ್ಲ; ನಿಜ ತಿಳಿಯುವ ಆಂದೋಲನವಾಗಿದೆ’ ಎಂದು ಹೇಳಿದರು. 

ಆಪ್‌ ನಾಯಕರಾದ ಆಶಿಷ್‌ ಖೇತಾನ್‌, ಸಂಜಯ್‌ ಸಿಂಗ್‌, ರಾಘವ ಛಡ್ಡಾ, ದುಗೇìಶ್‌ ಪಾಠಕ್‌ ಮತ್ತು ಸತ್ಯೇಂದ್ರ ಜೈನ್‌ ಇವರ ವಿದೇಶ ಪ್ರವಾಸದ ವಿವರಗಳನ್ನು ಮಾತ್ರವೇ ನಾನು ಕೇಳುತ್ತಿದ್ದೇನೆ ಎಂದು ಮಿಶ್ರಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next