Advertisement

ಐಸಿಎ ಪ್ರಯತ್ನಕ್ಕೆ ಕಪಿಲ್‌, ಗಾವಸ್ಕರ್‌ ಬೆಂಬಲ

10:00 PM May 02, 2020 | Sriram |

ಹೊಸದಿಲ್ಲಿ: ದೇಶವ್ಯಾಪಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸುಮಾರು 30 ಕ್ರಿಕೆಟಿಗರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಇಂಡಿಯನ್‌ ಕ್ರಿಕೆಟರ್ ಅಸೋಸಿಯೇಶನ್‌ (ಐಸಿಎ) ಪ್ರಯತ್ನಕ್ಕೆ ಖ್ಯಾತ ಆಟಗಾರರಾದ ಸುನೀಲ್‌ ಗಾವಸ್ಕರ್‌ ಮತ್ತು ಕಪಿಲ್‌ ದೇವ್‌ ತಮ್ಮ ಬೆಂಬಲ ಘೋಷಿಸಿದ್ದಾರೆ ಎಂದು ಐಸಿಎ ಅಧ್ಯಕ್ಷ ಅಶೋಕ್‌ ಮಲ್ಹೋತ್ರಾ ತಿಳಿಸಿದ್ದಾರೆ.

Advertisement

ಹಣದ ಆವಶ್ಯಕತೆಯಿರುವ ಮಾಜಿ ಕ್ರಿಕೆಟಿಗರಿಗೆ ನೆರವಾಗಲು ಐಸಿಎ ಈಗಾಗಲೇ 39 ಲಕ್ಷ ರೂ.ಗಳನ್ನು ಸಂಗ್ರಹಿಸಿದೆ. ನಿಧಿ ಸಂಗ್ರಹಿಸುವ ಸಲುವಾಗಿ ಐಸಿಎಯ ಉಪಕ್ರಮಕ್ಕೆ ಗಾವಸ್ಕರ್‌, ಕಪಿಲ್‌ ಮಾತ್ರವಲ್ಲದೇ ಗೌತಮ್‌ ಗಂಭೀರ್‌ ಮತ್ತು ಗುಂಡಪ್ಪ ವಿಶ್ವನಾಥ್‌ ಬೆಂಬಲ ಸೂಚಿಸಿದ್ದಾರೆ.

ಗುಜರಾತ್‌ನ ಕಾರ್ಪೊರೆಟ್‌ ಸಂಸ್ಥೆಯೊಂದು ಕೂಡ ಬೆಂಬಲದ ಕೊಡುಗೆ ನೀಡಿದೆ ಎಂದು ಮಲ್ಹೋತ್ರಾ ಹೇಳಿದರು.
ಹಲವು ಮಾಜಿ ಕ್ರಿಕೆಟಿಗರು ನಮ್ಮ ಪ್ರಯತ್ನಕ್ಕೆ ಹಣದ ಕೊಡುಗೆ ನೀಡಿದ್ದಾರೆ. ಕಳೆದ ವಾರ ಅಜರುದ್ದೀನ್‌ ಹಣಕಾಸಿನ ಬೆಂಬಲ ನೀಡಿದ್ದಾರೆ. ಮೇ 15ರ ವರೆಗೆ ನಾವು ದೇಣಿಗೆಯನ್ನು ಸ್ವೀಕರಿಸಲಿದ್ದೇವೆ ಆಬಳಿಕ ಪ್ರತಿ ವಲಯದಿಂದ ಐದರಿಂದ ಆರು ಕ್ರಿಕೆಟಿಗರ ಪಟ್ಟಿ ಮಾಡಿ ಹಣವನ್ನು ವಿತರಿಸಲಾಗುವುದು ಎಂದು ಮಲ್ಹೋತ್ರಾ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next