Advertisement

ಕಾಂತಾವರ: ಗಾಳಿ-ಮಳೆಗೆ ಅಪಾರ ಹಾನಿ

12:09 AM Aug 11, 2019 | sudhir |

ಪಳ್ಳಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಉಂಟಾಗುತ್ತಿದ್ದು, ಆ. 9ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಾಂತಾವರ ಗ್ರಾ.ಪಂ. ವ್ಯಾಪ್ತಿಯ 5 ಮನೆಗಳಿಗೆ ಹಾನಿ ಉಂಟಾಗಿದೆ.

Advertisement

ಕಾಂತಾವರ ಮರಂತಗುಡ್ಡೆ ನಿವಾಸಿ ಸುಂದರ ನಲ್ಕೆ ಅವರ ಮನೆಗೆ ಸುಮಾರು 80 ಸಾವಿರ ರೂ. ನಷ್ಟ ಸಂಭವಿಸಿದೆ. ಕಿಲಾಡಿ ನಿವಾಸಿಯಾದ ಜಯಶ್ರೀ ವಿ. ಭಟ್ ಅವರ ಮನೆಯ 200ಕ್ಕೂ ಅಧಿಕ ಹೆಂಚು ಹಾರಿ ಹೋಗಿದ್ದು, 20ಕ್ಕೂ ಅಧಿಕ ಶೀಟ್‌ಗಳು ಹಾನಿಗೊಂಡಿವೆ.

ಮರವಂತೆ ಗುಡ್ಡೆಯ ಲೀಲಾ ನಲ್ಕೆ ಮನೆಗೆ ಗಾಳಿಯಿಂದ ಹಾನಿ ಉಂಟಾಗಿ ಸುಮಾರು 10 ಸಾವಿರ ರೂ. ನಷ್ಟ ಸಂಭವಿಸಿದೆ. ಯಾದವ ನಲ್ಕೆಯವರ ಮನೆಗೆ ಮರ ಬಿದ್ದು ಸುಮಾರು 10 ಸಾವಿರ ರೂ., ಬಾರಾಡಿ ಮರಂತಗುಡ್ಡೆ ನಿವಾಸಿ ಗಿರೀಶ್‌ ಪೂಜಾರಿ ಅವರ ಅಂಗಡಿ ಮೇಲ್ಛಾವಣಿಗೆ ಹಾನಿಯಾಗಿ ಸುಮಾರು 10 ಸಾವಿರ ರೂ. ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಕಾಂತಾವರ ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಕೋಟ್ಯಾನ್‌, ಗ್ರಾಮಕರಣಿಕ ರವಿಚಂದ್ರ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next