Advertisement

ಲಿಂಗಪೂಜೆ ವೇಳೆ ಶತಾಯುಷಿ ಕನ್ನೋಳ್ಳಿ ಶ್ರೀ ಲಿಂಗೈಕ್ಯ

11:27 PM Feb 17, 2020 | Lakshmi GovindaRaj |

ಅಫಜಲಪುರ: ನಡೆದಾಡುವ ದೇವರು, ವಾಕ್‌ ಸಿದ್ದಿ ಪುರುಷರೆಂದು ಖ್ಯಾತರಾಗಿದ್ದ ಸಮೀಪದ ಸಿಂದಗಿ ತಾಲೂಕಿನ ಕನ್ನೋಳ್ಳಿಯ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯರು (105) ಲಿಂಗಪೂಜೆ ಮಾಡುತ್ತ ಸೋಮವಾರ ಬೆಳಗ್ಗೆ 8:25ಕ್ಕೆ ಲಿಂಗೈಕ್ಯರಾಗಿದ್ದಾರೆ.

Advertisement

1915ರಲ್ಲಿ ಜನಿಸಿದ ಶ್ರೀಗಳು ಕನ್ನೋಳ್ಳಿ ಹಿರೇಮಠಕ್ಕೆ 1933ರಲ್ಲಿ ಪಟ್ಟಾಧಿಕಾರ ಸ್ವೀಕರಿಸಿದ್ದರು. ಶ್ರೀಗಳು ಭಕ್ತರ ಬವಣೆಗಳನ್ನು ನೀಗಿಸುವ ಮೂಲಕ ವಿಜಯಪುರ, ಬಾಗಲಕೋಟೆ, ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮನೆ ಮಾತಾಗಿದ್ದರು. ಕಳೆದ ಕೆಲ ದಿನಗಳಿಂದ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು.

ಶ್ರೀಗಳ ಶಿವಸಂಸ್ಕಾರವು ಶ್ರೀಮಠದಲ್ಲಿ ಫೆ.18ರಂದು ಮಧ್ಯಾಹ್ನ 3ಗಂಟೆಗೆ ಧಾರ್ಮಿಕ ವಿಧಿ-ವಿಧಾನಗಳ ಪ್ರಕಾರ ಪ್ರಭುಸಾರಂಗದೇವ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯಲಿದೆ. ಭಕ್ತರ ದರ್ಶನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶ್ರೀಗಳ ಅಗಲಿಕೆಗೆ ಸಿಂದಗಿಯ ಶಾಂತೇಶ್ವರ ಮಠದ ಶ್ರೀಗಳು, ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಬಡದಾಳದ ಡಾ. ಚನ್ನಮಲ್ಲ ಶಿವಾಚಾರ್ಯರು, ಚಿನ್ಮಯ ಗಿರಿಯ ಸಿದ್ದರಾಮ ಶಿವಾಚಾರ್ಯರು ಹಾಗೂ ವೀರ ಮಹಾಂತ ಶಿವಾಚಾರ್ಯರು,

ಅತನೂರಿನ ಗುರುಬಸವ ಶಿವಾಚಾರ್ಯರು, ಚಿಂಚೋಳಿಯ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು, ನಿಲೂರಿನ ಮಲ್ಲಿಕಾರ್ಜುನ ಶಿವಾಚಾರ್ಯರು, ಹಿರೇ ಜೇವರ್ಗಿಯ ಗುರುಶಾಂತಲಿಂಗಾರಾಧ್ಯ ಶಿವಾಚಾರ್ಯರು, ಶಾಸಕರಾದ ಎಂ.ಸಿ. ಮನಗೂಳಿ, ಎಂ.ವೈ. ಪಾಟೀಲ್‌, ಮಾಜಿ ಶಾಸಕರಾದ ರಮೇಶ ಭೂಸನೂರ, ಮಾಲೀಕಯ್ಯ ಗುತ್ತೇದಾರ ಇತರರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next