Advertisement

ಕಿರುತೆರೆ ಕಲಾವಿದರಿಬ್ಬರ ಸಾವು

07:50 AM May 25, 2018 | Team Udayavani |

ಹರಿಹರ: ನಗರ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ಬುಧವಾರ ರಾತ್ರಿ ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಿರುತೆರೆ ಕಲಾವಿದರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಟಿವಿ
ನಿರೂಪಕ ಚಂದನ್‌ ಯಾನೆ ಚಂದ್ರಶೇಖರ (42), ಗಾಯಕಿ ಸಂತೋಷಿ (36) ಮೃತರು.

Advertisement

ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇವರು ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದರು. ಬುಧವಾರ ರಾತ್ರಿ 2-30ರ ಸುಮಾರಿಗೆ ಹನಗವಾಡಿ ಕ್ರಾಸ್‌ ಬಳಿ ಇವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದೆ. ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಚಂದನ್‌ ಹಾಗೂ ಸಂತೋಷಿ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತ ಪಟ್ಟರು.

ಕಾರು ಚಲಾಯಿಸುತ್ತಿದ್ದ ರಾಮಕೃಷ್ಣ ಹಾಗೂ ಪಕ್ಕದಲ್ಲಿ ಕುಳಿತಿದ್ದ ಅವರ ಪತ್ನಿ ಸುನಿತಾ ಗಾಯ ಗೊಂಡಿದ್ದಾರೆ.
ಇವರನ್ನು ದಾವಣಗೆರೆಯ ಎಸ್‌.ಎಸ್‌.ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು, ಲಾರಿಯ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ತಕ್ಷಣ ಏರ್‌ ಬ್ಯಾಗ್‌ ಓಪನ್‌ ಆಗಿದ್ದರಿಂದ ಹಾಗೂ ಮುಂದಿನ ಆಸನಗಳು ಕೆಳಮಟ್ಟದಲ್ಲಿದ್ದರಿಂದ ಮುಂದೆ ಕುಳಿತವರು ಬದುಕುಳಿದಿದ್ದಾರೆ. ಹಿಂದಿನ ಆಸನಗಳಲ್ಲಿ ಕುಳಿತವರ ತಲೆಗೆ ಲಾರಿಯ ಬಾಡಿಯ ಹೊಡೆತ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.ಗುರುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಮೃತದೇಹಗಳನ್ನು ಬೆಂಗಳೂರಿಗೆ ಕೊಂಡೊಯ್ಯಲಾಯಿತು. ಚಿಕ್ಕಬಳ್ಳಾಪುರ ಮೂಲದ ಚಂದನ್‌,ಮೊದಲಿಗೆ ಈ ಟಿವಿ ಕನ್ನಡದಲ್ಲಿ “ನಮ್‌ ಊನ್ಯಾìಗೆಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ನಂತರ ಉದಯ ಟಿವಿಯಲ್ಲಿ ನಿರೂಪಕರಾಗಿದ್ದ ಚಂದನ್‌, ತಮ್ಮ ವಿಭಿನ್ನ ನಿರೂಪಣೆ ಮೂಲಕ ಮನೆಮಾತಾದವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next