Advertisement

ಕನ್ನಡ ಸಂಘ ಮುಂಬಯಿ : ಕನ್ನಡ ಸರ್ಟಿಫಿಕೆಟ್‌ ಕೋರ್ಸ್‌ ಉದ್ಘಾಟನೆ

04:45 PM Jul 06, 2017 | |

ಮುಂಬಯಿ: ಕನ್ನಡ ಸಂಘ ಮುಂಬಯಿ ವಾರ್ಷಿಕವಾಗಿ ಆಯೋಜಿಸುತ್ತಿರುವ ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ನ ಉದ್ಘಾಟನೆ ಮತ್ತು ಪ್ರಮಾಣಪತ್ರ ವಿತರಣ ಕಾರ್ಯಕ್ರಮವು ಜು. 16ರಂದು ಪೂರ್ವಾಹ್ನ 10ರಿಂದ ಮಾಟುಂಗ ಪೂರ್ವದ  ಭಾವುದಾಜಿ ರಸ್ತೆಯ ವೆಂಕಟೇಶ್‌ ನಿವಾಸದ ಸಂಘದ ಕಚೇರಿಯಲ್ಲಿ ಜರಗಲಿದೆ.

Advertisement

ಸಂಘದ ಅಧ್ಯಕ್ಷ ಗುರುರಾಜ್‌ ಎಸ್‌.ನಾಯಕ್‌ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ  ಕಾರ್ಯಕ್ರಮದಲ್ಲಿ ಸಾಹಿತ್ಯ ಬಳಗ ಮುಂಬಯಿ ಇದರ ಗೌರವ ಕಾರ್ಯದರ್ಶಿ ಎಸ್‌. ಕೆ. ಸುಂದರ್‌ ಅವರು 2017-2018ನೇ ಸಾಲಿನ ಕನ್ನಡ ಸರ್ಟಿಫಿಕೆಟ್‌ ಕೋರ್ಸ್‌ಗೆ  ಚಾಲನೆ ನೀಡಲಿದ್ದಾರೆ.

ಸಂಘದ ಗೌರವ ಕೋಶಾಧಿಕಾರಿ ಸುಧಾಕರ್‌ ಸಿ. ಪೂಜಾರಿ, ಸಂಘದ ಗೌರವ ಜೊತೆ ಕಾರ್ಯದರ್ಶಿ ಸೋಮನಾಥ್‌ ಕರ್ಕೇರ, ಮಹಿಳಾ ವಿಭಾಗಧ್ಯಕ್ಷೆ ರಜನಿ ವಿ. ಪೈ, ವಾಚನಾಲಯದ ಮುಖ್ಯಸ್ಥ ಎಸ್‌. ಕೆ. ಪದ್ಮನಾಭ, ಕನ್ನಡ ತರಬೇತಿ ಶಿಕ್ಷಕಿ ಆರ್ಚನಾ ಆರ್‌.ಪೂಜಾರಿ ಅವರ  ಉಪಸ್ಥಿತಿಯಲ್ಲಿ ಜರಗುವ ಅವಳಿ ಕಾರ್ಯಕ್ರಮದಲ್ಲಿ  ಕನ್ನಡಾಭಿಮಾನಿಗಳು  ಪಾಲ್ಗೊಳ್ಳುವಂತೆ ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್‌ ಎನ್‌. ಬಂಗೇರ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next