Advertisement

ನುಡಿ ಜಾತ್ರೆ: ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ

09:20 AM Feb 06, 2020 | Mithun PG |

ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕವಿ ಡಾ‌.ಎಚ್.ಎಸ್.ವೆಂಕಟೇಶಮೂರ್ತಿ ಅವರ ಮೆರವಣಿಗೆಗೆ ಅದ್ದೂರಿ ಚಾಲನೆ ದೊರೆತಿದೆ‌. ಆರು ಕಿ.ಮೀ. ಭವ್ಯ ಮೆರವಣಿಗೆ ನಡೆಯಲಿದೆ.

Advertisement

ನಗರದ ರಂಗಮಂದಿರ ಸಮೀಪ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಲ್ಲಾಧಿಕಾರಿ ಶರತ್ ಬಿ. ಚಾಲನೆ ನೀಡಿದರು‌. ಡಾ.ಎಚ್.ಎಸ್ ವೆಂಕಟೇಶಮೂರ್ತಿ ಅವರೊಂದಿಗೆ ಸಾರೋಟ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ ಸಹ ಉಪಸ್ಥಿತರಿದ್ದಾರೆ. ಜತೆಗೆ ಎಲ್ಲಾ ಕಸಾಪ ಜಿಲ್ಲಾಧ್ಯಕ್ಷರಿಗೂ ಮೆರವಣಿಗೆಯಲ್ಲಿ ಸಾರೋಟ್ ಭಾಗ್ಯ ಕಲ್ಪಿಸಲಾಗಿದೆ. ಜಿಲ್ಲಾಧ್ಯಕ್ಷರ ಹತ್ತು ಸಾರೋಟ್ ಗಳು ಮೆರವಣಿಗೆಯಲ್ಲಿ ಸಾಗಿವೆ.

ಡೊಳ್ಳು ಕುಣಿತ, ಕೀಲು ಕುದುರೆ, ತಿಥಿ ಮೇಳ, ಬಯಲಾಟ, ಲಂಬಾಣಿ ನೃತ್ಯ, ಜನಪದ ಹಾಗೂ ಅಲೆಮಾರಿ ಕಲಾ ತಂಡಗಳು ಸೇರಿದಂತೆ 60 ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಿವೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next