Advertisement

ಸಾಹಿತ್ಯ ಸಮ್ಮೇಳನ: ವಿಷಯ ಆಯ್ಕೆ ಸಮಿತಿಗೆ ಸದಸ್ಯರ ನೇಮಕ

12:20 PM Oct 03, 2018 | Team Udayavani |

ಬೆಂಗಳೂರು: ಧಾರವಾಡದಲ್ಲಿ ನಡೆಯಲಿರುವ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ಸ್ವರೂಪ ಮತ್ತು ವಿಷಯ ಗಳನ್ನು ಆಯ್ಕೆ ಮಾಡುವ ಸಂಬಂಧ ಕನ್ನಡ ಸಾಹಿತ್ಯ ಪರಿಷತ್‌ “ಸಮ್ಮೇಳನ ವಿಷಯ ಆಯ್ಕೆ ಸಮಿತಿ’ಯನ್ನು ರಚಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಮನು ಬಳಿಗಾರ್‌ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಹಿರಿಯ  ವಿದ್ವಾಂಸ ಡಾ| ಸಿ.ಎನ್‌.ರಾಮಚಂದ್ರನ್‌, ಸಾಹಿತಿ ಮುಕುಂದರಾಜ್‌, ಡಾ| ಕೆ.ಶಾರದಾ, ಡಾ| ನೀಲಗಿರಿ ತಳವಾರ್‌, ಡಾ| ರಾಜೇಶ್ವರಿ ಮಹೇಶ್ವರಯ್ಯ ಅವರು ಸಮಿತಿಯ ಸದಸ್ಯರುಗಳಾಗಿದ್ದಾರೆ ಎಂದು ಪರಿಷತ್‌ನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next