Advertisement

ವೈಶಂಪಾಯನ ತೀರ ಪೋಸ್ಟರ್‌ ರಿಲೀಸ್‌

03:26 PM Aug 27, 2021 | Team Udayavani |

“ವೈಶಂಪಾಯನ ತೀರ’ ಎಂಬ ಸಿನಿಮಾವೊಂದು ಆರಂಭವಾಗುತ್ತಿದೆ. ಕಥೆಗಾರ ಮಹಾಬಲ ಮೂರ್ತಿ ಕೊಡ್ಲೆಕೆರೆ ಅವರ ಸಣ್ಣ ಕಥೆ ವೈಶಂಪಾಯನ ತೀರ ಇದನ್ನು ಆಧರಿಸಿದ ಈಗ ಅದೇ ಹೆಸರಿನಲ್ಲಿ ಈ ಚಿತ್ರವಾಗುತ್ತಿದೆ. ಸ್ವರಸಂಗಮ ಎಂಟರ್‌ ಟೈನ್‌ಮೆಂಟ್‌ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಮೇಶ್‌ ಬೇಗಾರ್‌ ಈ ಚಿತ್ರದ ನಿರ್ದೇಶಕರು.

Advertisement

ಇತ್ತೀಚೆಗೆ ಚಿತ್ರದ ಟೈಟಲ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಯಕ್ಷಗಾನ ಕಲಾವಿದರ ಜೀವನದಲ್ಲಿ ಬರುವ ಬದುಕಿನ ಸಂಬಂಧ, ಭಾವ ಸೂಕ್ಷ್ಮತೆಯನ್ನುಅನಾವರಣಗೊಳಿಸುತ್ತಾ ಸಾಗುವ ಮೂಲ ಕಥೆಗೆ ಪೂರಕವಾಗಿ ಮಲೆನಾಡಿನ ಪ್ರಕೃತಿ ನಾಶದ ಕಥನವನ್ನು ಸಂವಾದಿಯಾಗಿ ಜೋಡಿಸಲಾಗಿದ್ದು, ಸ್ತ್ರೀ ದೌರ್ಜನ್ಯ ಮತ್ತು ಪ್ರಕೃತಿ ಮೇಲಿನ ದಬ್ಟಾಳಿಕೆಯನ್ನು ಸಮೀಕರಿಸಿ ನೋಡುವ ಪ್ರಯತ್ನದ ಪ್ರಯೋಗ ಶೀಲಚಿತ್ರವಾಗಿ
“ವೈಶಂಪಾಯನ ತೀರ’ ಮೂಡಿಬರಲಿದೆ ಎಂಬುದು ಚಿತ್ರತಂಡದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next